ಸಾಹಿಬ್ಗಂಜ್: ಬಿಜೆಪಿ ಸಂಸದರೊಬ್ಬರು ಯುವತಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ಹತ್ಯೆ ಯತ್ನ ಮಾಡಿದ್ದರಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏನೂ ಹೇಳಲಿಲ್ಲ. ಬಿಜೆಪಿಯ ಕೆಲವು ಸಂಸದರಿಂದ ನಮ್ಮಹೆಣ್ಣುಮಕ್ಕಳನ್ನು ಕಾಪಾಡಬೇಕಿದೆ ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಜಾರ್ಖಂಡ್ನ ಸಾಹಿಬ್ಗಂಜ್ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್, ಪ್ರಧಾನಿ ಮೋದಿ ಅವರು ಚಂದ್ರನಲ್ಲಿಗೆ ರಾಕೆಟ್ ಕಳುಹಿಸಿದರು ಆದರೆ ಜನರಿಗೆ ಶುದ್ಧ ನೀರು ಪೂರೈಸಲಿಲ್ಲ, ರೈತರಿಗೆ ಸಹಾಯ ಮಾಡಲಿಲ್ಲ.
BJP has damaged the purchasing power of common PPL in turn demand has been slowed down which has further led to lower production and retrenchment of employees: @RahulGandhi#राहुल_संग_है_झारखंडhttps://t.co/W6cwUQBA0H
— Md Obaidullah (@mdbaid) December 12, 2019
ಅಭಿವೃದ್ಧಿ ಕಾರ್ಯದ ಪರವಾಗಿಯೇ ಮೋದಿ ನಿಲ್ಲುವುದಾದರೆ, ಜಾರ್ಖಂಡ್ ರಾಜ್ಯದ ಅಭಿವೃದ್ದಿ ಮರೆತಿರುವಮುಖ್ಯಮಂತ್ರಿ ರಘುಬರ್ ದಾಸ್ ಅವರನ್ನು ಪ್ರಧಾನಿ ಯಾಕೆ ಟೀಕಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
LIVE: Shri @RahulGandhi addresses a public rally in Mehrma, Jharkhand.#राहुल_संग_है_झारखंड https://t.co/zmYcs6npQk
— Congress (@INCIndia) December 12, 2019
ರಾಹುಲ್ ಭಾಷಣದ ಮುಖ್ಯಾಂಶಗಳು
ನೋಟು ರದ್ಧತಿ ವೇಳೆ ಬಡಜನರು ಬ್ಯಾಂಕ್ ಮುಂದೆ ಸಾಲು ನಿಂತರು. ಆದರೆ ದೊಡ್ಡ ಉದ್ಯಮಿಗಳು ಕಪ್ಪು ಹಣವನ್ನು ಬಿಳಿ ಮಾಡುವಲ್ಲಿ ತೊಡಗಿದ್ದರು. ಅವರಿಗೆ ಈ ಅವಕಾಶ ನೀಡಿದ್ದು ಮೋದಿ.
People of Jharkhand should not forget who made them stand in queue for your own money. Now same party will make you stand again to prove your citizenship.#राहुल_संग_है_झारखंड
— HP Youth Congress (@IYCHimachal) December 12, 2019
ಜಾರ್ಖಂಡ್ನಲ್ಲಿ ಹಣದ ಕೊರತೆ ಇಲ್ಲ. ಆದರೆ ಅದು ಜನರಿಗೆ ತಲುಪುತ್ತಿಲ್ಲ. ಜಾರ್ಖಂಡ್ನಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾದರೆ ಆ ಹಣ ನಿಮಗೆ ತಲುಪುತ್ತದೆ.
Narendra Modi wants an India that is scared. He wants the people of India to be weak, divided and he has become Prime Minister only by dividing people by religion, caste, region: @RahulGandhi #राहुल_संग_है_झारखंड
— Congress (@INCIndia) December 12, 2019
ಮೋದಿ ದೇಶದಲ್ಲಿಭಯದ ವಾತಾವರಣ ಸೃಷ್ಟಿಸಿದ್ದಾರೆ. ದೇಶದ ಜನರು ದುರ್ಬಲ ಮತ್ತು ವಿಭಜನೆಗೊಂಡಿರಲಿ ಎಂದು ಅವರು ಬಯಸುತ್ತಾರೆ. ದೇಶದ ಜನರನ್ನು ಧರ್ಮ, ಜಾತಿ ಮತ್ತು ಪ್ರಾದೇಶಿಕವಾಗಿ ವಿಭಜಿಸಿದ ನಂತರವೇ ಮೋದಿ ಪ್ರಧಾನಿ ಸ್ಥಾನಕ್ಕೇರಿದ್ದು .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.