<p><strong>ಶ್ರೀನಗರ :</strong>ಎರಡು ವಾರಗಳಿಂದ ದೂರವಾಣಿ, ಇಂಟರ್ನೆಟ್ ಸ್ಥಗಿತಗೊಂಡು ಸಂಪರ್ಕವೇ ಇಲ್ಲದಂತಾಗಿರುವ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪತ್ರಗಳು ಮರುಹುಟ್ಟು ಪಡೆದಿವೆ.</p>.<p>ಆದರೆ ಅಂಚೆ ಕಚೇರಿ ಮೂಲಕ ಈ ಸಂವಹನ ನಡೆಯುತ್ತಿಲ್ಲ. ವಿಮಾನಗಳ ಮೂಲಕ ಹೊರಗಿನ ನಗರಗಳಿಗೆ ತೆರಳುವ ಪ್ರಯಾಣಿಕರಿಗೆ ಪತ್ರಗಳನ್ನು ನೀಡಿ, ತಮ್ಮವರಿಗೆ ಸಂದೇಶ ಕಳುಹಿಸುವ ಯತ್ನವನ್ನು ಕಾಶ್ಮೀರಿಗಳು ಮಾಡುತ್ತಿದ್ದಾರೆ.</p>.<p>ಶ್ರೀನಗರ ವಿಮಾನ ನಿಲ್ದಾಣದ ಹೊರಗಡೆ ನಿಂತಿದ್ದ ಶಾಹುದ್ ಭಟ್ ಅವರು ದೆಹಲಿಯಲ್ಲಿರುವ ತಮ್ಮ ಮಗಳಿಗೆ ಪತ್ರವನ್ನು ತಲುಪಿಸುವ ಸೂಕ್ತ ಪ್ರಯಾಣಿಕರಿಗಾಗಿ ಹುಡುಕಾಡುತ್ತಿದ್ದರು.</p>.<p>‘ನಾವು ಕಾಶ್ಮೀರದಲ್ಲಿ ಸುರಕ್ಷಿತವಾಗಿದ್ದು, ಆತಂಕ ಬೇಡ. ನಿನ್ನ ಯೋಗಕ್ಷೇಮ ನೋಡಿಕೋ. ಹಣ ಕಳಿಸಲು ಯತ್ನಿಸಿದರೂ ನನಗೆ ಸಾಧ್ಯವಾಗುತ್ತಿಲ್ಲ. ಸದ್ಯವೇ ಬ್ಯಾಂಕಿಂಗ್ ಹಾಗೂ ಇಂಟರ್ನೆಟ್ ಸೇವೆ ಪುನರಾರಂಭವಾಗುವ ವಿಶ್ವಾಸವಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.</p>.<p>‘ದಯವಿಟ್ಟು ಟಾಟಾ ಸ್ಕೈ ರೀಚಾರ್ಜ್ ಮಾಡಿಸು. ನನಗೆ ಇಲ್ಲಿ ರೀಚಾರ್ಜ್ ಮಾಡಿಸಲು ಆಗುತ್ತಿಲ್ಲ. ಲ್ಯಾಂಡ್ಲೈನ್ ಪುನರಾಂಭವಾಗುವ ಸಾಧ್ಯತೆಯಿದ್ದು, ನಿನ್ನ ಚಿಕ್ಕಪ್ಪನ ದೂರವಾಣಿ ಸಂಖ್ಯೆಗೆ ಕರೆಮಾಡು’ ಎಂದು ಮತ್ತೊಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.</p>.<p><strong>ಇದನ್ನೂ ಓದಿ:<a href="https://cms.prajavani.net/stories/national/kashmir-eased-after-revoking-658715.html" target="_blank">ಕಣಿವೆ ರಾಜ್ಯದಲ್ಲಿ ನಿರ್ಬಂಧ ಸಡಿಲ</a></strong></p>.<p>ಮುಂಬೈನಲ್ಲಿರುವ ಮಗನಿಗೆ ಪತ್ರವನ್ನು ವಾಟ್ಸ್ಆ್ಯಪ್ ಮಾಡುವಂತೆ ವ್ಯಕ್ತಿಯೊಬ್ಬರು ವಿಮಾನ ಪ್ರಯಾಣಿಕರಿಗೆ ಮನವಿ ಮಾಡುತ್ತಿದ್ದ ದೃಶ್ಯವೂ ಕಂಡುಬಂದಿತು. ನಾವು ಶಿಲಾಯುಗಕ್ಕೆ ಮರಳಿದಂತೆ ಭಾಸವಾಗುತ್ತಿದೆ ಎಂದು ಅವರು ಅಸಮಾಧಾನ ಹೊರಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ :</strong>ಎರಡು ವಾರಗಳಿಂದ ದೂರವಾಣಿ, ಇಂಟರ್ನೆಟ್ ಸ್ಥಗಿತಗೊಂಡು ಸಂಪರ್ಕವೇ ಇಲ್ಲದಂತಾಗಿರುವ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪತ್ರಗಳು ಮರುಹುಟ್ಟು ಪಡೆದಿವೆ.</p>.<p>ಆದರೆ ಅಂಚೆ ಕಚೇರಿ ಮೂಲಕ ಈ ಸಂವಹನ ನಡೆಯುತ್ತಿಲ್ಲ. ವಿಮಾನಗಳ ಮೂಲಕ ಹೊರಗಿನ ನಗರಗಳಿಗೆ ತೆರಳುವ ಪ್ರಯಾಣಿಕರಿಗೆ ಪತ್ರಗಳನ್ನು ನೀಡಿ, ತಮ್ಮವರಿಗೆ ಸಂದೇಶ ಕಳುಹಿಸುವ ಯತ್ನವನ್ನು ಕಾಶ್ಮೀರಿಗಳು ಮಾಡುತ್ತಿದ್ದಾರೆ.</p>.<p>ಶ್ರೀನಗರ ವಿಮಾನ ನಿಲ್ದಾಣದ ಹೊರಗಡೆ ನಿಂತಿದ್ದ ಶಾಹುದ್ ಭಟ್ ಅವರು ದೆಹಲಿಯಲ್ಲಿರುವ ತಮ್ಮ ಮಗಳಿಗೆ ಪತ್ರವನ್ನು ತಲುಪಿಸುವ ಸೂಕ್ತ ಪ್ರಯಾಣಿಕರಿಗಾಗಿ ಹುಡುಕಾಡುತ್ತಿದ್ದರು.</p>.<p>‘ನಾವು ಕಾಶ್ಮೀರದಲ್ಲಿ ಸುರಕ್ಷಿತವಾಗಿದ್ದು, ಆತಂಕ ಬೇಡ. ನಿನ್ನ ಯೋಗಕ್ಷೇಮ ನೋಡಿಕೋ. ಹಣ ಕಳಿಸಲು ಯತ್ನಿಸಿದರೂ ನನಗೆ ಸಾಧ್ಯವಾಗುತ್ತಿಲ್ಲ. ಸದ್ಯವೇ ಬ್ಯಾಂಕಿಂಗ್ ಹಾಗೂ ಇಂಟರ್ನೆಟ್ ಸೇವೆ ಪುನರಾರಂಭವಾಗುವ ವಿಶ್ವಾಸವಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.</p>.<p>‘ದಯವಿಟ್ಟು ಟಾಟಾ ಸ್ಕೈ ರೀಚಾರ್ಜ್ ಮಾಡಿಸು. ನನಗೆ ಇಲ್ಲಿ ರೀಚಾರ್ಜ್ ಮಾಡಿಸಲು ಆಗುತ್ತಿಲ್ಲ. ಲ್ಯಾಂಡ್ಲೈನ್ ಪುನರಾಂಭವಾಗುವ ಸಾಧ್ಯತೆಯಿದ್ದು, ನಿನ್ನ ಚಿಕ್ಕಪ್ಪನ ದೂರವಾಣಿ ಸಂಖ್ಯೆಗೆ ಕರೆಮಾಡು’ ಎಂದು ಮತ್ತೊಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.</p>.<p><strong>ಇದನ್ನೂ ಓದಿ:<a href="https://cms.prajavani.net/stories/national/kashmir-eased-after-revoking-658715.html" target="_blank">ಕಣಿವೆ ರಾಜ್ಯದಲ್ಲಿ ನಿರ್ಬಂಧ ಸಡಿಲ</a></strong></p>.<p>ಮುಂಬೈನಲ್ಲಿರುವ ಮಗನಿಗೆ ಪತ್ರವನ್ನು ವಾಟ್ಸ್ಆ್ಯಪ್ ಮಾಡುವಂತೆ ವ್ಯಕ್ತಿಯೊಬ್ಬರು ವಿಮಾನ ಪ್ರಯಾಣಿಕರಿಗೆ ಮನವಿ ಮಾಡುತ್ತಿದ್ದ ದೃಶ್ಯವೂ ಕಂಡುಬಂದಿತು. ನಾವು ಶಿಲಾಯುಗಕ್ಕೆ ಮರಳಿದಂತೆ ಭಾಸವಾಗುತ್ತಿದೆ ಎಂದು ಅವರು ಅಸಮಾಧಾನ ಹೊರಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>