ಭೋಪಾಲ್ : ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪಕ್ಷದ ಹೆಸರನ್ನು ತೆಗೆದಿರುವ ವಿಚಾರ ಸೋಮವಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.ಟ್ವಿಟರ್ ವಿವರಗಳಲ್ಲಿ ‘ಜನಸೇವಕ, ಕ್ರಿಕೆಟ್ ಪ್ರೇಮಿ’ ಎಂದಷ್ಟೇ ಅವರು ಬರೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಕಮಲನಾಥ್ ಜತೆಗಿನ ಭಿನ್ನಾಭಿಪ್ರಾಯಗಳಿಂದ ನೊಂದು ಸಿಂಧಿಯಾ ಪಕ್ಷ ತೊರೆಯುತ್ತಾರೆ ಎಂಬ ವದಂತಿಗಳನ್ನು ಅವರು ತಳ್ಳಿಹಾಕಿದ್ದಾರೆ. ಟ್ವಿಟರ್ನಲ್ಲಿ ಸ್ವ–ವಿವರ ಸಂಕ್ಷಿಪ್ತಗೊಳಿಸುವ ಸಲಹೆ ಬಂದಿದ್ದರಿಂದತಿಂಗಳ ಹಿಂದೆಯೇ ಬದಲಿಸಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.