ಭಾರತ ಮತ್ತು ಪಾಕಿಸ್ತಾನ ಸರಿಯಾಗಿ ವರ್ತಿಸಿದರೆ ಗಡಿ ನಿಯಂತ್ರಣಾ ರೇಖೆಯಲ್ಲಿಯೂ ಶಾಂತಿ ನೆಲೆಸುತ್ತದೆ.
ಯೋಧರು ಯಾಕೆ ಸಾಯುತ್ತಿದ್ದಾರೆ? ನಮ್ಮ ದೇಶದ ಗಡಿ ಕಾಯುತ್ತಿರುವ ಯೋಧರುಸಾಯುತ್ತಿರುವುದು ಯಾಕೆ? ಭಾರತ ಮತ್ತು ಪಾಕಿಸ್ತಾನ ಸರಿಯಾಗಿ ವರ್ತಿಸಿದರೆ ಯೋಧರು ಸಾಯಲ್ಲ.ಗಡಿ ನಿಯಂತ್ರಣಾ ರೇಖೆಯಲ್ಲಿಯೂ ಪರಿಸ್ಥಿತಿ ನಿಯಂತ್ರಣದಲ್ಲಿರುತ್ತದೆ.
ಏತನ್ಮಧ್ಯೆ, ಪುಲ್ವಾಮ ದಾಳಿ ಬಗ್ಗೆ ಕೇಳಿದಾಗ, ನಾನು ಮೈಯ್ಯಂ ಎಂಬ ನಿಯತಕಾಲಿಕೆಯಲ್ಲಿ ಕಾಶ್ಮೀರದ ಸಮಸ್ಯೆ ಬಗ್ಗೆ ಬರೆದಿದ್ದೆ. ಈಗ ಉಂಟಾಗಿರುವ ಪರಿಸ್ಥಿತಿ ಬಗ್ಗೆ ನಾನು ಅವತ್ತೇ ಹೇಳಿದ್ದೆ.ಕಾಶ್ಮೀರದಲ್ಲಿ ಜನಾಭಿಪ್ರಾಯ ಕೇಳಿ, ಜನರು ಮಾತನಾಡುವಂತೆ ಮಾಡಿ. ಸರ್ಕಾರ ಇಲ್ಲಿವರೆಗೆ ಇದನ್ನು ಯಾಕೆ ಮಾಡಿಲ್ಲ? ಅವರು ಭಯಪಡುತ್ತಿರುವುದಾದರೂ ಯಾಕೆ? ಅವರು ದೇಶವನ್ನು ವಿಭಜಿಸಲು ನೋಡುತ್ತಿದ್ದಾರೆ ಅಷ್ಟೇ ಎಂದಿದ್ದಾರೆ ಕಮಲ್.