<p><strong>ಶ್ರೀನಗರ:</strong> ಅಮರನಾಥ ಯಾತ್ರೆಯ ಯಾತ್ರಿಕರನ್ನು ಏರ್ಲಿಫ್ಟ್ ಮಾಡುವಂತೆಭಾರತೀಯ ವಾಯುಪಡೆಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮನವಿ ಮಾಡಿದೆ. ಯಾತ್ರಿಕರನ್ನು ಕಾಶ್ಮೀರ ಕಣಿವೆಯಿಂದ ಜಮ್ಮು, ಪಠಾಣ್ಕೋಟ್ ಅಥವಾ ದೆಹಲಿಗೆ ತಲುಪಿಸುವ ಮೂಲಕ ಸುರಕ್ಷಿತವಾಗಿ ಅವರ ಊರುಗಳಿಗೆ ಸೇರಲು ಅನುವಾಗುವಂತೆ ಕೋರಿದೆ.</p>.<p>ದೇಶದ ಪ್ಯಾರಾಮಿಲಿಟರಿ ಪಡೆಗಳೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿ–17 ಸಾಗಾಣಿಕೆ ವಿಮಾನವು ಅಮರನಾಥ ಯಾತ್ರಿಕರನ್ನು ಕಾಶ್ಮೀರದಿಂದ ಹೊರಗೆ ಕರೆದೊಯ್ಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿಎಎನ್ಐ ವರದಿ ಮಾಡಿದೆ.</p>.<p>ಬೋಯಿಂಗ್ ನಿರ್ಮಿತ ಸಿ–17 ಗ್ಲೋಬ್ಮಾಸ್ಟರ್ ವಿಮಾನವು ಒಮ್ಮೆಗೆ 230 ಪ್ರಯಾಣಿಕರನ್ನು ಏರ್ಲಿಫ್ಟ್ ಮಾಡುವ ಸಾಮರ್ಥ್ಯ ಹೊಂದಿದೆ. ರಷ್ಯಾದ ಇಲ್ಯುಷಿನ್–76 ವಿಮಾನಕ್ಕೆ ಹೋಲಿಸಿದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಿ–17 ಕಡಿಮೆ ಸಮಯದಲ್ಲಿ ಪ್ರಯಾಣ ಪೂರೈಸುತ್ತದೆ.</p>.<p><strong>ಇದನ್ನೂ ಓದಿ:<a href="https://cms.prajavani.net/stories/national/governors-word-jk-not-final-655543.html" target="_blank">ಜಮ್ಮು–ಕಾಶ್ಮೀರ:ಇಲ್ಲಿ ಏನಾಗುತ್ತಿದೆ? ಕೇಂದ್ರ ಪ್ರತಿಕ್ರಿಯಿಸಲಿ–ಓಮರ್ ಅಬ್ದುಲ್ಲಾ</a></strong></p>.<p>ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಆತಂಕ ದಟ್ಟವಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ಯಾತ್ರಿಕರು ಮತ್ತು ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರದಿಂದ ಆದಷ್ಟು ಬೇಗನೆ ಮರಳುವಂತೆ ಜಮ್ಮು–ಕಾಶ್ಮೀರ ಸರ್ಕಾರ ಶುಕ್ರವಾರ ಪ್ರಕಟಣೆ ಹೊರಡಿಸಿದೆ.</p>.<p><strong>ಇವನ್ನೂ ಓದಿ</strong></p>.<p><strong><a href="https://www.prajavani.net/stories/national/military-security-beef-jammu-655470.html" target="_blank">ಜಮ್ಮು–ಕಾಶ್ಮೀರದಲ್ಲಿ ಕಟ್ಟೆಚ್ಚರ| ಕಣಿವೆ ತೊರೆಯಲು ಪ್ರವಾಸಿ, ಯಾತ್ರಿಕರಿಗೆ ಸೂಚನೆ</a></strong></p>.<p><strong><a href="https://cms.prajavani.net/stories/national/governor-satya-pal-malik-655522.html" target="_blank">ಕಾಶ್ಮೀರದಲ್ಲಿ ಹೆಚ್ಚುವರಿ ಸೇನಾ ಸಿಬ್ಬಂದಿ: ಆತಂಕ ಬೇಡ ಎಂದ ರಾಜ್ಯಪಾಲ ಮಲಿಕ್</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ:</strong> ಅಮರನಾಥ ಯಾತ್ರೆಯ ಯಾತ್ರಿಕರನ್ನು ಏರ್ಲಿಫ್ಟ್ ಮಾಡುವಂತೆಭಾರತೀಯ ವಾಯುಪಡೆಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮನವಿ ಮಾಡಿದೆ. ಯಾತ್ರಿಕರನ್ನು ಕಾಶ್ಮೀರ ಕಣಿವೆಯಿಂದ ಜಮ್ಮು, ಪಠಾಣ್ಕೋಟ್ ಅಥವಾ ದೆಹಲಿಗೆ ತಲುಪಿಸುವ ಮೂಲಕ ಸುರಕ್ಷಿತವಾಗಿ ಅವರ ಊರುಗಳಿಗೆ ಸೇರಲು ಅನುವಾಗುವಂತೆ ಕೋರಿದೆ.</p>.<p>ದೇಶದ ಪ್ಯಾರಾಮಿಲಿಟರಿ ಪಡೆಗಳೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿ–17 ಸಾಗಾಣಿಕೆ ವಿಮಾನವು ಅಮರನಾಥ ಯಾತ್ರಿಕರನ್ನು ಕಾಶ್ಮೀರದಿಂದ ಹೊರಗೆ ಕರೆದೊಯ್ಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿಎಎನ್ಐ ವರದಿ ಮಾಡಿದೆ.</p>.<p>ಬೋಯಿಂಗ್ ನಿರ್ಮಿತ ಸಿ–17 ಗ್ಲೋಬ್ಮಾಸ್ಟರ್ ವಿಮಾನವು ಒಮ್ಮೆಗೆ 230 ಪ್ರಯಾಣಿಕರನ್ನು ಏರ್ಲಿಫ್ಟ್ ಮಾಡುವ ಸಾಮರ್ಥ್ಯ ಹೊಂದಿದೆ. ರಷ್ಯಾದ ಇಲ್ಯುಷಿನ್–76 ವಿಮಾನಕ್ಕೆ ಹೋಲಿಸಿದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಿ–17 ಕಡಿಮೆ ಸಮಯದಲ್ಲಿ ಪ್ರಯಾಣ ಪೂರೈಸುತ್ತದೆ.</p>.<p><strong>ಇದನ್ನೂ ಓದಿ:<a href="https://cms.prajavani.net/stories/national/governors-word-jk-not-final-655543.html" target="_blank">ಜಮ್ಮು–ಕಾಶ್ಮೀರ:ಇಲ್ಲಿ ಏನಾಗುತ್ತಿದೆ? ಕೇಂದ್ರ ಪ್ರತಿಕ್ರಿಯಿಸಲಿ–ಓಮರ್ ಅಬ್ದುಲ್ಲಾ</a></strong></p>.<p>ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಆತಂಕ ದಟ್ಟವಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ಯಾತ್ರಿಕರು ಮತ್ತು ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರದಿಂದ ಆದಷ್ಟು ಬೇಗನೆ ಮರಳುವಂತೆ ಜಮ್ಮು–ಕಾಶ್ಮೀರ ಸರ್ಕಾರ ಶುಕ್ರವಾರ ಪ್ರಕಟಣೆ ಹೊರಡಿಸಿದೆ.</p>.<p><strong>ಇವನ್ನೂ ಓದಿ</strong></p>.<p><strong><a href="https://www.prajavani.net/stories/national/military-security-beef-jammu-655470.html" target="_blank">ಜಮ್ಮು–ಕಾಶ್ಮೀರದಲ್ಲಿ ಕಟ್ಟೆಚ್ಚರ| ಕಣಿವೆ ತೊರೆಯಲು ಪ್ರವಾಸಿ, ಯಾತ್ರಿಕರಿಗೆ ಸೂಚನೆ</a></strong></p>.<p><strong><a href="https://cms.prajavani.net/stories/national/governor-satya-pal-malik-655522.html" target="_blank">ಕಾಶ್ಮೀರದಲ್ಲಿ ಹೆಚ್ಚುವರಿ ಸೇನಾ ಸಿಬ್ಬಂದಿ: ಆತಂಕ ಬೇಡ ಎಂದ ರಾಜ್ಯಪಾಲ ಮಲಿಕ್</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>