ಹೈದರಾಬಾದ್: ಸ್ಕಂದ ಷಷ್ಠಿ ಎಂದೇ ಪ್ರಖ್ಯಾತವಾಗಿರುವ ಮಾರ್ಗಶಿರ ಮಾಸ, ಶುಕ್ಲ ಪಕ್ಷದಷಷ್ಠಿ, ಗುರುವಾರ ಮಧ್ಯಾಹ್ನ 1.24ಕ್ಕೆ ಸಲ್ಲುವ ಶುಭ ‘ಬಾಹುಬಲಿ ಮುಹೂರ್ತ’ದಲ್ಲಿ ತೆಲಂಗಾಣದ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಪ್ರಮಾಣ ವಚನ ಸ್ವೀಕರಿಸಿದರು.