<p><strong>ತಿರುವನಂತಪುರ:</strong> ಕಾರ್ಯಕರ್ತರು, ಹಿತೈಷಿಗಳಿಂದ ದೇಣಿಗೆ ಸಂಗ್ರಹಿಸಿ ವಾಹನವನ್ನು ಖರೀದಿಸಿ ಕೊಡುವ ಯುವ ಕಾಂಗ್ರೆಸ್ ಘಟಕದ ನಿರ್ಧಾರಕ್ಕೆ ಕೇರಳದ ಸಂಸದೆ ರಮ್ಯಾ ಹರಿದಾಸ್ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.</p>.<p>ಯುವಕಾಂಗ್ರೆಸ್ ತೀರ್ಮಾನಕ್ಕೆ ಕೇರಳದ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ಅವರು ವಿರೋಧ ವ್ಯಕ್ತಪಡಿಸಿದ ಹಿಂದೆಯೇ ಅಸಮ್ಮತಿ ವ್ಯಕ್ತಪಡಿಸಿ ಸಂಸದೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ್ದಾರೆ.</p>.<p>ಅವರು ಪ್ರತಿನಿಧಿಸುವ ಅಲತ್ತೂರು ಕ್ಷೇತ್ರದ ಯುವ ಕಾಂಗ್ರೆಸ್ ಘಟಕ, ಕಾರ್ಯಕರ್ತರು ಮತ್ತು ಹಿತೈಷಿಗಳಿಂದ ತಲಾ ₹ 1000 ದೇಣಿಗೆ ಸಂಗ್ರಹಿಸಿ, ₹ 14 ಲಕ್ಷ ಮೌಲ್ಯದ ವಾಹನ ಕೊಡಿಸಲು ತೀರ್ಮಾನಿಸಿತ್ತು.</p>.<p>ಆದರೆ, ಸಂಸದೆಯಾಗಿ ರಮ್ಯಾ ₹ 1.9 ಲಕ್ಷ ಭತ್ಯೆ ಪಡೆಯುತ್ತಿದ್ದು, ಬಡ್ಡಿರಹಿತವಾದ ವಾಹನ ಸಾಲವನ್ನು ಪಡೆಯಲು ಅರ್ಹರಿದ್ದಾರೆ ಎಂಬ ಹಿನ್ನೆಲೆಯಲ್ಲಿ ವಾಹನ ಕೊಡುಗೆ ನಿರ್ಧಾರ ಟೀಕೆಗೆ ಒಳಗಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಕಾರ್ಯಕರ್ತರು, ಹಿತೈಷಿಗಳಿಂದ ದೇಣಿಗೆ ಸಂಗ್ರಹಿಸಿ ವಾಹನವನ್ನು ಖರೀದಿಸಿ ಕೊಡುವ ಯುವ ಕಾಂಗ್ರೆಸ್ ಘಟಕದ ನಿರ್ಧಾರಕ್ಕೆ ಕೇರಳದ ಸಂಸದೆ ರಮ್ಯಾ ಹರಿದಾಸ್ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.</p>.<p>ಯುವಕಾಂಗ್ರೆಸ್ ತೀರ್ಮಾನಕ್ಕೆ ಕೇರಳದ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ಅವರು ವಿರೋಧ ವ್ಯಕ್ತಪಡಿಸಿದ ಹಿಂದೆಯೇ ಅಸಮ್ಮತಿ ವ್ಯಕ್ತಪಡಿಸಿ ಸಂಸದೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ್ದಾರೆ.</p>.<p>ಅವರು ಪ್ರತಿನಿಧಿಸುವ ಅಲತ್ತೂರು ಕ್ಷೇತ್ರದ ಯುವ ಕಾಂಗ್ರೆಸ್ ಘಟಕ, ಕಾರ್ಯಕರ್ತರು ಮತ್ತು ಹಿತೈಷಿಗಳಿಂದ ತಲಾ ₹ 1000 ದೇಣಿಗೆ ಸಂಗ್ರಹಿಸಿ, ₹ 14 ಲಕ್ಷ ಮೌಲ್ಯದ ವಾಹನ ಕೊಡಿಸಲು ತೀರ್ಮಾನಿಸಿತ್ತು.</p>.<p>ಆದರೆ, ಸಂಸದೆಯಾಗಿ ರಮ್ಯಾ ₹ 1.9 ಲಕ್ಷ ಭತ್ಯೆ ಪಡೆಯುತ್ತಿದ್ದು, ಬಡ್ಡಿರಹಿತವಾದ ವಾಹನ ಸಾಲವನ್ನು ಪಡೆಯಲು ಅರ್ಹರಿದ್ದಾರೆ ಎಂಬ ಹಿನ್ನೆಲೆಯಲ್ಲಿ ವಾಹನ ಕೊಡುಗೆ ನಿರ್ಧಾರ ಟೀಕೆಗೆ ಒಳಗಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>