ಕೊಟ್ಟೂರು (ಬಳ್ಳಾರಿ ಜಿಲ್ಲೆ): ಸಾಹಿತಿ ಕುಂ.ವೀರಭದ್ರಪ್ಪ ಅವರ 20ನೇ ಕಾದಂಬರಿ ‘ಜೈ ಭಜರಂಗಬಲಿ’ ಇದೇ 18ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಬಿಡುಗಡೆ ಆಗಲಿದೆ.
ಮಂಗಳವಾರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಂವೀ, ‘ಈ ಕಾದಂಬರಿ ವರ್ತಮಾನ ಕಾಲದ ತಲ್ಲಣ, ವ್ಯಂಗ್ಯ, ವಿಡಂಬನೆ ಹೊಂದಿದೆ. ಇದು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸದೊಂದು ದಾರಿ ತೋರಲಿದ್ದು, ಅಸಂಗತ, ಅವಾಸ್ತವ ಅಂಶಗಳ ಕಟು ಚಿತ್ರಣ ಒಳಗೊಂಡಿದೆ’ ಎಂದರು.
ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಅಧ್ಯಕ್ಷತೆ ವಹಿಸುವರು. ಸಾಹಿತ್ಯ ಪೋಷಕರಾದ ಎಂ.ಜಿ.ಗೌಡ ಕಾದಂಬರಿ ಬಿಡುಗಡೆ ಮಾಡುವರು. ಕಾದಂಬರಿ ಕುರಿತು ಲೇಖಕ ಎಸ್.ದಿವಾಕರ, ಪ್ರೊ.ಬಸವರಾಜ ಕಲ್ಗುಡಿ ಮಾತನಾಡುವರು ಎಂದರು.