ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಸಚಿವಾಲಯಕ್ಕೆ ಬಂದ ಚಿರತೆ; ಪತ್ತೆ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ

Last Updated 5 ನವೆಂಬರ್ 2018, 7:35 IST
ಅಕ್ಷರ ಗಾತ್ರ

ಅಹಮದಾಬಾದ್‌: ಅನಿರೀಕ್ಷಿತ ಅತಿಥಿಯಾಗಿ ಚಿರತೆಯೊಂದಿಗೆ ಸೋಮವಾರಗುಜರಾತ್‌ ಸಚಿವಾಲಯದ ಪ್ರದೇಶ ಪ್ರವೇಶಿಸಿದ್ದು, ಆತಂಕಕ್ಕೆ ಕಾರಣವಾಗಿದೆ.

ಗೇಟ್‌ನ ಅಡಿಯಿಂದ ಚಿರತೆ ನುಸುಳುತ್ತಿರುವುದುಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಸೋಮವಾರ ಬೆಳಗಿನ ಜಾವ ಚಿರತೆ ಇಲ್ಲಿನ ಸಚಿವಾಲಯದ ಆವರಣ ಪ್ರವೇಶಿಸಿದೆ.

ಇದೇ ಆವರಣದಲ್ಲಿ ಮುಖ್ಯಮಂತ್ರಿ ಕಚೇರಿ, ಸಚಿವಾಲಯಗಳು ಹಾಗೂ ವಿಧಾನಸಭೆ ಕಟ್ಟಡಗಳಿದ್ದು, ಸುಮಾರು ಅರಣ್ಯ ಇಲಾಖೆಯ 200 ಸಿಬ್ಬಂದಿ ಚಿರತೆ ಪತ್ತೆಮಾಡಿ ಸೆರೆಹಿಡಿಯುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಪ್ರದೇಶ ಸುರಕ್ಷಿತವೆಂದು ಘೋಷಿಸುವವರೆಗೂ ಈ ಪ್ರದೇಶಕ್ಕೆ ಪ್ರವೇಶ ಕಲ್ಪಿಸುವ ಎಲ್ಲ ದ್ವಾರಗಳನ್ನು ಮುಚ್ಚಲಾಗಿರುತ್ತದೆ ಎಂದು ಗಾಂಧಿನಗರದ ಎಸ್‌ಪಿ ಮಯೂರ್‌ ಚಾವ್ಡಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT