<p><strong>ಹೈದರಾಬಾದ್ (ಪಿಟಿಐ): </strong>ಟಿಆರ್ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರು ರೂಪಿಸಲು ಉದ್ದೇಶಿಸಿರುವ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟದಲ್ಲಿ (ಸಂಯುಕ್ತ ರಂಗ) ಕಾಂಗ್ರೆಸ್ ಪಕ್ಷವನ್ನು ಸೇರಿಸಿಕೊಳ್ಳಲು ಯಾವುದೇ ವಿರೋಧ ಇಲ್ಲ. ಆದರೆ, ಈ ಮೈತ್ರಿಕೂಟದ ಚಾಲಕ ಸ್ಥಾನವನ್ನು ಆ ಪಕ್ಷಕ್ಕೆ ಬಿಟ್ಟುಕೊಡಲಾಗದು ಎಂದು ಟಿಆರ್ಎಸ್ ಹೇಳಿದೆ.</p>.<p>‘ಸಂಯುಕ್ತ ರಂಗವೇ ಚಾಲಕನ ಸ್ಥಾನದಲ್ಲಿ ಇರಬೇಕು ಮತ್ತು ಸರ್ಕಾರವನ್ನು ಮುನ್ನಡೆಸಬೇಕು ಎಂಬ ವಿಚಾರದಲ್ಲಿ ರಾವ್ ಅವರು ದೃಢವಾಗಿದ್ದಾರೆ’ ಎಂದು ಟಿಆರ್ಎಸ್ ವಕ್ತಾರ ಆಬಿದ್ ರಸೂಲ್ ಖಾನ್ ಹೇಳಿದ್ದಾರೆ.</p>.<p>ಸಂಯುಕ್ತ ರಂಗಕ್ಕೆ ಸ್ಥಾನಗಳ ಕೊರತೆ ಎದುರಾದರೆ ಕಾಂಗ್ರೆಸ್ ಪಕ್ಷದಿಂದ ಬಾಹ್ಯ ಬೆಂಬಲ ಪಡೆಯುವ ಆಯ್ಕೆಯನ್ನು ಪರಿಶೀಲಿಸ<br />ಲಾಗುವುದು. ಆದರೆ, ಸಂಯುಕ್ತ ರಂಗವು ಯಾವುದೇ ಕಾರಣಕ್ಕೂ ಬಿಜೆಪಿ ಜತೆಗೆ ಹೋಗುವುದಿಲ್ಲ ಎಂದು ಖಾನ್ ತಿಳಿಸಿದ್ದಾರೆ.</p>.<p>ರಾವ್ ಅವರು ಈವರೆಗೆ, ಕಾಂಗ್ರೆಸ್ ಅಥವಾ ಬಿಜೆಪಿ ಇಲ್ಲದ ಸಂಯುಕ್ತ ರಂಗದ ಬಗ್ಗೆ ಮಾತನಾಡುತ್ತಿದ್ದರು. ಈ ನಿಲುವಿನಲ್ಲಿ ಸ್ವಲ್ಪ ಬದಲಾವಣೆ ಆಗಿದೆ ಎಂಬುದು ಗಮನಾರ್ಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್ (ಪಿಟಿಐ): </strong>ಟಿಆರ್ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರು ರೂಪಿಸಲು ಉದ್ದೇಶಿಸಿರುವ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟದಲ್ಲಿ (ಸಂಯುಕ್ತ ರಂಗ) ಕಾಂಗ್ರೆಸ್ ಪಕ್ಷವನ್ನು ಸೇರಿಸಿಕೊಳ್ಳಲು ಯಾವುದೇ ವಿರೋಧ ಇಲ್ಲ. ಆದರೆ, ಈ ಮೈತ್ರಿಕೂಟದ ಚಾಲಕ ಸ್ಥಾನವನ್ನು ಆ ಪಕ್ಷಕ್ಕೆ ಬಿಟ್ಟುಕೊಡಲಾಗದು ಎಂದು ಟಿಆರ್ಎಸ್ ಹೇಳಿದೆ.</p>.<p>‘ಸಂಯುಕ್ತ ರಂಗವೇ ಚಾಲಕನ ಸ್ಥಾನದಲ್ಲಿ ಇರಬೇಕು ಮತ್ತು ಸರ್ಕಾರವನ್ನು ಮುನ್ನಡೆಸಬೇಕು ಎಂಬ ವಿಚಾರದಲ್ಲಿ ರಾವ್ ಅವರು ದೃಢವಾಗಿದ್ದಾರೆ’ ಎಂದು ಟಿಆರ್ಎಸ್ ವಕ್ತಾರ ಆಬಿದ್ ರಸೂಲ್ ಖಾನ್ ಹೇಳಿದ್ದಾರೆ.</p>.<p>ಸಂಯುಕ್ತ ರಂಗಕ್ಕೆ ಸ್ಥಾನಗಳ ಕೊರತೆ ಎದುರಾದರೆ ಕಾಂಗ್ರೆಸ್ ಪಕ್ಷದಿಂದ ಬಾಹ್ಯ ಬೆಂಬಲ ಪಡೆಯುವ ಆಯ್ಕೆಯನ್ನು ಪರಿಶೀಲಿಸ<br />ಲಾಗುವುದು. ಆದರೆ, ಸಂಯುಕ್ತ ರಂಗವು ಯಾವುದೇ ಕಾರಣಕ್ಕೂ ಬಿಜೆಪಿ ಜತೆಗೆ ಹೋಗುವುದಿಲ್ಲ ಎಂದು ಖಾನ್ ತಿಳಿಸಿದ್ದಾರೆ.</p>.<p>ರಾವ್ ಅವರು ಈವರೆಗೆ, ಕಾಂಗ್ರೆಸ್ ಅಥವಾ ಬಿಜೆಪಿ ಇಲ್ಲದ ಸಂಯುಕ್ತ ರಂಗದ ಬಗ್ಗೆ ಮಾತನಾಡುತ್ತಿದ್ದರು. ಈ ನಿಲುವಿನಲ್ಲಿ ಸ್ವಲ್ಪ ಬದಲಾವಣೆ ಆಗಿದೆ ಎಂಬುದು ಗಮನಾರ್ಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>