<p><strong>ಮುಂಬೈ</strong>: ಅಂತರದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಅಪ್ಪ– ಅಮ್ಮನಿಂದ ಬೈಸಿಕೊಂಡ ಮೂರು ವರ್ಷದ ಬಾಲಕಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಖುದ್ದಾಗಿ ಫೋನ್ ಕರೆಮಾಡಿ ಮಾತನಾಡಿದ್ದಾರೆ.</p>.<p>ಬಾಲಕಿ ತಂದೆಗೆ ಕರೆ ಮಾಡಿದ ಉದ್ಧವ್, ‘ ಶಿವ ಸೈನಿಕರಿಗೆ (ಸೇನಾ ಕಾರ್ಯಕರ್ತರಿಗೆ) ತೊಂದರೆ ಕೊಡಬೇಡಿ. ನನ್ನ ಹೆಸರನ್ನು ಬಳಸಿ ನೀವು ಬಾಲಕಿಅನ್ಶಿಕಾಗೆ ಬೈಯ್ದಿದ್ದೀರಿ’ ಎಂದು ಹಾಸ್ಯ ಧಾಟಿಯಲ್ಲಿ ಹೇಳಿರುವುದು ಧ್ವನಿಮುದ್ರಿತವಾಗಿದೆ.</p>.<p>ಹಾಲು ಮಾರುವವರಿಗೆ ಹಣ ಪಾವತಿಸುವಾಗ ಅಜಾಗರೂಕತೆಯಿಂದ ಶಿಂಧೆನೋಟುಗಳನ್ನು ಮುಟ್ಟಿದ್ದಳು. ಇದಕ್ಕಾಗಿ ಆಕೆ ಕ್ಷಮೆ ಕೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ನೋಟುಗಳನ್ನು ಮುಟ್ಟಿದ್ದರ ಬಗ್ಗೆ ಉದ್ಧವ್ ಆಂಕಲ್ಗೆ ದೂರು ನೀಡುತ್ತೇನೆ ಎಂದು ಅನ್ಶಿಕಾ ತಾಯಿ ವಿಡಿಯೊದಲ್ಲಿ ಹೇಳಿದ್ದರು.</p>.<p>ಪುಣೆಯ ವಿಶ್ರಾಂತವಾಡಿಯಲ್ಲಿ ನೆಲೆಸಿರುವ ಈ ಕುಟುಂಬಕ್ಕೆ ಮುಖ್ಯಮಂತ್ರಿಯ ಕರೆ ಮಾಡಿರುವುದು ಆಶ್ಚರ್ಯ ತಂದಿದೆ. ಅಲ್ಲದೇ , ‘ಇನ್ನೊಮ್ಮೆ ತಂದೆ ತಾಯಿ ಬೈದರೆ, ನನಗೆ ಕರೆ ಮಾಡು’ ಎಂದು ಉದ್ಧವ್ ಅನ್ಶಿಕಾಗೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಅಂತರದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಅಪ್ಪ– ಅಮ್ಮನಿಂದ ಬೈಸಿಕೊಂಡ ಮೂರು ವರ್ಷದ ಬಾಲಕಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಖುದ್ದಾಗಿ ಫೋನ್ ಕರೆಮಾಡಿ ಮಾತನಾಡಿದ್ದಾರೆ.</p>.<p>ಬಾಲಕಿ ತಂದೆಗೆ ಕರೆ ಮಾಡಿದ ಉದ್ಧವ್, ‘ ಶಿವ ಸೈನಿಕರಿಗೆ (ಸೇನಾ ಕಾರ್ಯಕರ್ತರಿಗೆ) ತೊಂದರೆ ಕೊಡಬೇಡಿ. ನನ್ನ ಹೆಸರನ್ನು ಬಳಸಿ ನೀವು ಬಾಲಕಿಅನ್ಶಿಕಾಗೆ ಬೈಯ್ದಿದ್ದೀರಿ’ ಎಂದು ಹಾಸ್ಯ ಧಾಟಿಯಲ್ಲಿ ಹೇಳಿರುವುದು ಧ್ವನಿಮುದ್ರಿತವಾಗಿದೆ.</p>.<p>ಹಾಲು ಮಾರುವವರಿಗೆ ಹಣ ಪಾವತಿಸುವಾಗ ಅಜಾಗರೂಕತೆಯಿಂದ ಶಿಂಧೆನೋಟುಗಳನ್ನು ಮುಟ್ಟಿದ್ದಳು. ಇದಕ್ಕಾಗಿ ಆಕೆ ಕ್ಷಮೆ ಕೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ನೋಟುಗಳನ್ನು ಮುಟ್ಟಿದ್ದರ ಬಗ್ಗೆ ಉದ್ಧವ್ ಆಂಕಲ್ಗೆ ದೂರು ನೀಡುತ್ತೇನೆ ಎಂದು ಅನ್ಶಿಕಾ ತಾಯಿ ವಿಡಿಯೊದಲ್ಲಿ ಹೇಳಿದ್ದರು.</p>.<p>ಪುಣೆಯ ವಿಶ್ರಾಂತವಾಡಿಯಲ್ಲಿ ನೆಲೆಸಿರುವ ಈ ಕುಟುಂಬಕ್ಕೆ ಮುಖ್ಯಮಂತ್ರಿಯ ಕರೆ ಮಾಡಿರುವುದು ಆಶ್ಚರ್ಯ ತಂದಿದೆ. ಅಲ್ಲದೇ , ‘ಇನ್ನೊಮ್ಮೆ ತಂದೆ ತಾಯಿ ಬೈದರೆ, ನನಗೆ ಕರೆ ಮಾಡು’ ಎಂದು ಉದ್ಧವ್ ಅನ್ಶಿಕಾಗೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>