ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದ ಮಮತಾ, ಸೂಚನಾಫಲಕಗಳಲ್ಲಿಯೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ಹೆಸರು ಇರದಂತೆ ನೋಡಿಕೊಳ್ಳಬೇಕು. ಕಳೆದ ಐದು ವರ್ಷಗಳಲ್ಲಿ ಮೋದಿ ಏನೂ ಮಾಡಿಲ್ಲ.ಹಾಗಾಗಿ ಅವರ ಕ್ಷಿಪಣಿ, ಬಾಂಬ್ ಮತ್ತು ಹುತಾತ್ಮ ಯೋಧರ ಮೃತದೇಹಗಳನ್ನು ತೋರಿಸುತ್ತಿದ್ದಾರೆ.ಹುತಾತ್ಮ ಯೋಧರ ಮೃತದೇಹ ತೋರಿಸಿ ಅವಕಾಶವಾದದ ರಾಜಕಾರಣ ಮಾಡಲು ನಿಮಗೆ ನಾಚಿಕೆಯಾಗುತ್ತಿಲ್ಲವೇ? ನಾವೆಲ್ಲರೂ ನಮ್ಮ ದೇಶ ಮತ್ತು ಸಶಸ್ತ್ರ ಪಡೆಗೆ ಬೆಂಬಲವಾಗಿ ನಿಂತಿದ್ದೇವೆ. ಆದರೆ ಮೋದಿ ಸರ್ಕಾರಕ್ಕೆ ಅಲ್ಲ.
ನಾವೆಲ್ಲರೂ ಪಕ್ಕದ ದೇಶದವರು ಮೋದಿ ಒಬ್ಬರೇ ಭಾರತೀಯರು ಎಂಬಂತೆ ಅವರಾಡಿಕೊಳ್ಳುತ್ತಾರೆ. ಬಾಲಾಕೋಟ್ನಲ್ಲಿ ವಾಯುಪಡೆ ನಡೆಸಿದ ವಾಯುದಾಳಿ ಬಗ್ಗೆ ಸರ್ಕಾರವನ್ನ ಪ್ರಶ್ನಿಸಿದರೆ ಅವರನ್ನು ಪಾಕಿಸ್ತಾನಿ ಎಂದು ಕರೆಯುತ್ತಾರೆ.
ದೇಶಭಕ್ತಿ ಬಗ್ಗೆ ಪಾಠ ಮಾಡುವುದನ್ನು ಬಿಜೆಪಿ ನಿಲ್ಲಿಸಲಿ.ಅವರಿಂದ ನಾವುಕಲಿಯಬೇಕಾದುದು ಏನೂ ಇಲ್ಲ.