ಕೋಲ್ಕತ್ತ: ‘ನಾನು ಚುನಾಯಿತ ಮುಖ್ಯಮಂತ್ರಿ, ನೀವು ನಾಮನಿರ್ದೇಶಿತ ರಾಜ್ಯಪಾಲರು ಎಂಬುದು ನೆನಪಿರಲಿ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಪಾಲ ಜಗದೀಪ್ ಧನಕರ್ ಅವರಿಗೆ ಗುರುವಾರ ಖಾರವಾಗಿ ಪತ್ರ ಬರೆದಿದ್ದಾರೆ.
‘ನಾನು ದೇಶದ ಹೆಮ್ಮೆಯ ರಾಜ್ಯವೊಂದರ ಮುಖ್ಯಮಂತ್ರಿ ಎಂಬುದನ್ನೇ ನೀವು ಮರೆತಂತೆ ಕಾಣುತ್ತದೆ. ನೀವೊಬ್ಬ ನಾಮನಿರ್ದೇಶಿತ ರಾಜ್ಯಪಾಲರು ಎಂಬುದನ್ನು ಮರೆತಿರಬಹುದು’ ಎಂದು ಅವರು ವ್ಯಂಗ್ಯವಾಡಿದ್ದಾರೆ.
‘ನನ್ನ ಮತ್ತು ನನ್ನ ಸಚಿವ ಸಂಪುಟದ ಸದಸ್ಯರ ಮೇಲೆ ನೇರವಾಗಿ ದಾಳಿ ಮಾಡುತ್ತಿದ್ದೀರಿ. ನನ್ನ ಆಡಳಿತದಲ್ಲಿ ನಿಮ್ಮ ಹಸ್ತಕ್ಷೇಪ ಹೆಚ್ಚುತ್ತಿದೆ’ ಎಂದೂ ಅವರು ಪತ್ರದಲ್ಲಿ ಹೇಳಿದ್ದಾರೆ.