ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖಕ್ಕೆ ಅಪರಿಚಿತವ್ಯಕ್ತಿಯೊಬ್ಬ ಖಾರದ ಪುಡಿ ಎರಚಿದ ಘಟನೆ ನಡೆದಿದೆ.
ಆತನನ್ನು ನರೈನಾ ನಿವಾಸಿ ಅನಿಲ್ ಕುಮಾರ್ ಶರ್ಮಾ ಎಂದು ಗುರುತಿಸಲಾಗಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಮಧ್ಯಾಹ್ನ ಸುಮಾರು 2 ಗಂಟೆ ವೇಳೆ ಕಾರ್ಯದರ್ಶಿ ಕಚೇರಿಯಿಂದ ಹೊರಬರುವ ಹೊತ್ತಿಗೆ, ಅನಿಲ್ ಒಂದು ಕೈಯಲ್ಲಿ ಪತ್ರ, ಇನ್ನೊಂದು ಕೈಯಲ್ಲಿ ಖಾರದ ಪುಡಿ ಹಿಡಿದು ನಿಂತಿದ್ದರು.
#WATCH: CCTV visuals of the incident that took place at Delhi's Central Secretariat where chilli powder fell from a man's hand. He had come to meet Delhi CM Arvind Kejriwal with his grievances. Investigation underway whether it was an attack or powder fell unintentionally pic.twitter.com/OlRrScpmC2
ಕೇಜ್ರಿವಾಲ್ ಬಂದ ಕೂಡಲೇ ಪಾದ ಮುಟ್ಟಿ ನಮಸ್ಕರಿಸಲು ಹೋಗಿದ್ದಾರೆ. ಆಗ ಅದನ್ನು ತಡೆದಾಗ ಮೇಲೆದ್ದ ಆತ, ನೀವೊಬ್ಬರೇ ನಮ್ಮ ಭರವಸೆ ಎಂದು ಕೂಗುತ್ತಾ ಮುಖದ ಮೇಲೆ ಖಾರದ ಪುಡಿ ಎರಚಿದ್ದಾನೆ ಎಂದು ಮೂಲಗಳು ತಿಳಿಸಿವೆ