‘ಲಾಕ್ಡೌನ್ ಬಹುಶಃ ವಿಭಜನೆಯಷ್ಟು ಕೆಟ್ಟದ್ದಲ್ಲ. ಏಕೆಂದರೆ ಆ ಸಮಯಯದಲ್ಲಿ ಭೀಕರ ಕೋಮು ಹಿಂಸಾಚಾರವೂ ನಡೆದಿತ್ತು. ಆದರೆ, ವಿಭಜನೆಯ ನಂತರ ಭಾರತದಲ್ಲಿ ನಡೆದ ಮಾನವ ನಿರ್ಮಿತ ಅತಿ ದೊಡ್ಡ ದುರಂತವಿದು.ಅಂದು ನೆಹರೂ, ಪಟೇಲ್ ಮತ್ತು ಅಂಬೇಡ್ಕರ್ ಅವರಂಥ ಉನ್ನತ ರಾಜಕಾರಣಿಗಳಿದ್ದರು. ಅಷ್ಟೇ ಅಲ್ಲ ಕಮಲಾದೇವಿ ಚಟ್ಟೋಪಾಧ್ಯಾಯ, ಮೃದುಲಾ ಸಾರಾಭಾಯಿ ಅವರಂಥ ನಿಸ್ವಾರ್ಥ ಸಾಮಾಜಿಕ ಕಾರ್ಯಕರ್ತರಿದ್ದರು. ಈ ನಾಯಕರು ಭಾರತವನ್ನು ಒಗ್ಗೂಡಿಸಲು ಮತ್ತು ಅದರ ಆರ್ಥಿಕತೆಯನ್ನು ಪುನರ್ ಪ್ರತಿಷ್ಠಾಪಿಸಲುತಮ್ಮ ವೈಯಕ್ತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿದ್ದರು’ ಎಂದು ಹೇಳಿದ್ದಾರೆ.