‘ಕಾರ್ಮಿಕರು, ಲಾಕ್ಡೌನ್ ಅವಧಿಯಲ್ಲಿ ಯಾವುದೇ ಕೆಲಸವಿಲ್ಲದೆ, ಹಣ, ಊಟ–ತಿಂಡಿ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಇಂಥ ಸಂದರ್ಭದಲ್ಲಿ ಅವರನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡದೆ ಜೈಲಿಗೆ ಹಾಕಲಾಗಿದೆ. ಇವರು ಅಪರಾಧಿಗಳಲ್ಲ, ಬದಲಾಗಿ ಸಂತ್ರಸ್ತರು. ಇವರು ಪೊಲೀಸ್ ವಶದಲ್ಲಿ ಇರುವ ಅವಶ್ಯಕತೆ ಇಲ್ಲ. ವೈಯಕ್ತಿಕ ಬಾಂಡ್ ಹೊರತುಪಡಿಸಿ ಇನ್ಯಾವುದೇ ಷರತ್ತುಗಳನ್ನು ಹಾಕದೆ ತಕ್ಷಣವೇ ಅವರನ್ನು ಬಂಧಮುಕ್ತಗೊಳಿಸಬೇಕು’ ಎಂದು ನ್ಯಾಯಮೂರ್ತಿ ಪರೇಶ್ ಉಪಾಧ್ಯಾಯ ಹೇಳಿದರು.