ಇನ್ನು ಎನ್ಡಿಎ–2ನ ಮೊದಲ ಬಜೆಟ್ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರೂ ಮಾತನಾಡಿದ್ದಾರೆ. ನವಭಾರತಕ್ಕಾಗಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಈ ಬಜೆಟ್ ಎಲ್ಲರ ಒಳಗೊಳ್ಳುವಿಕೆಗೆ ಮತ್ತು ಪ್ರಗತಿಗೆ ಅಡಿಗಲ್ಲು ಹಾಕಲಿದೆ. ಭಾರತದ ಕೃಷಿಕರು, ಯುವಕರು, ಮಹಿಳೆಯರು, ಬಡವರ ಅಗತ್ಯಗಳನ್ನು ಪೂರೈಸಲು ಇದು ಪೂರಕವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.