<p><strong>ನವದೆಹಲಿ:</strong> ಈ ದೇಶವನ್ನು ಸಮೃದ್ಧಗೊಳಿಸುವ, ಜನರನ್ನು ಸಮರ್ಥರನ್ನಾಗಿ ಮಾಡುವ ಬಜೆಟ್ ಇದು. ಬಡವರಿಗೆ ಶಕ್ತಿ ಸಿಕ್ಕರೆ, ಯುವಕರಿಗೆ ಉತ್ತಮ ನಾಳೆಗಳು ದೊರೆಯಲಿವೆ ಎಂದು ಬಜೆಟ್ ಕುರಿತು ನರೇಂದ್ರ ಮೋದಿ ಅವರು ಅನಿಸಿಕೆ ಹಂಚಿಕೊಂಡಿದ್ದಾರೆ.</p>.<p>ಆಯವ್ಯಯ ಪತ್ರ ಮಂಡನೆ ನಂತರ ಮಾತನಾಡಿರುವ ಅವರು ‘ಇದು ನಾಗರಿಕ ಸ್ನೇಹಿ ಬಜೆಟ್. ಮಧ್ಯಮ ವರ್ಗದ ಜನ ಈ ಬಜೆಟ್ನೊಂದಿಗೆ ಅಭಿವೃದ್ಧಿಯತ್ತ ಹೆಜ್ಜೆ ಹಾಕಲಿದ್ದಾರೆ. ದೇಶದ ಪ್ರಗತಿ ಇನ್ನಷ್ಟು ವೇಗದಲ್ಲಿ ಆಗಲಿದೆ. ದೇಶದ ತೆರಿಗೆ ವ್ಯವಸ್ಥೆ ಸರಳಗೊಂಡಿದ್ದರೆ, ಮೂಲಸೌಕರ್ಯ ಆಧುನೀಕರಣಗೊಳ್ಳುತ್ತಿದೆ,’ ಎಂದು ಅವರು ಹೇಳಿದರು.</p>.<p>ನವ ಭಾರತಕ್ಕಾಗಿ ಮಂಡನೆಯಾಗಿರುವ ಈ ಬಜೆಟ್ ಕೃಷಿ ಕ್ಷೇತ್ರದ ರೂಪಾಂತರಕ್ಕೆ ನಕ್ಷೆಯಾಗಲಿದೆ. ಇದು ದೇಶದ ಭರವಸೆ ಎಂದೂ ಅವರು ಕೊಂಡಾಡಿದ್ದಾರೆ.</p>.<p>ಇನ್ನು ಎನ್ಡಿಎ–2ನ ಮೊದಲ ಬಜೆಟ್ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರೂ ಮಾತನಾಡಿದ್ದಾರೆ. ನವಭಾರತಕ್ಕಾಗಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಈ ಬಜೆಟ್ ಎಲ್ಲರ ಒಳಗೊಳ್ಳುವಿಕೆಗೆ ಮತ್ತು ಪ್ರಗತಿಗೆ ಅಡಿಗಲ್ಲು ಹಾಕಲಿದೆ. ಭಾರತದ ಕೃಷಿಕರು, ಯುವಕರು, ಮಹಿಳೆಯರು, ಬಡವರ ಅಗತ್ಯಗಳನ್ನು ಪೂರೈಸಲು ಇದು ಪೂರಕವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಈ ದೇಶವನ್ನು ಸಮೃದ್ಧಗೊಳಿಸುವ, ಜನರನ್ನು ಸಮರ್ಥರನ್ನಾಗಿ ಮಾಡುವ ಬಜೆಟ್ ಇದು. ಬಡವರಿಗೆ ಶಕ್ತಿ ಸಿಕ್ಕರೆ, ಯುವಕರಿಗೆ ಉತ್ತಮ ನಾಳೆಗಳು ದೊರೆಯಲಿವೆ ಎಂದು ಬಜೆಟ್ ಕುರಿತು ನರೇಂದ್ರ ಮೋದಿ ಅವರು ಅನಿಸಿಕೆ ಹಂಚಿಕೊಂಡಿದ್ದಾರೆ.</p>.<p>ಆಯವ್ಯಯ ಪತ್ರ ಮಂಡನೆ ನಂತರ ಮಾತನಾಡಿರುವ ಅವರು ‘ಇದು ನಾಗರಿಕ ಸ್ನೇಹಿ ಬಜೆಟ್. ಮಧ್ಯಮ ವರ್ಗದ ಜನ ಈ ಬಜೆಟ್ನೊಂದಿಗೆ ಅಭಿವೃದ್ಧಿಯತ್ತ ಹೆಜ್ಜೆ ಹಾಕಲಿದ್ದಾರೆ. ದೇಶದ ಪ್ರಗತಿ ಇನ್ನಷ್ಟು ವೇಗದಲ್ಲಿ ಆಗಲಿದೆ. ದೇಶದ ತೆರಿಗೆ ವ್ಯವಸ್ಥೆ ಸರಳಗೊಂಡಿದ್ದರೆ, ಮೂಲಸೌಕರ್ಯ ಆಧುನೀಕರಣಗೊಳ್ಳುತ್ತಿದೆ,’ ಎಂದು ಅವರು ಹೇಳಿದರು.</p>.<p>ನವ ಭಾರತಕ್ಕಾಗಿ ಮಂಡನೆಯಾಗಿರುವ ಈ ಬಜೆಟ್ ಕೃಷಿ ಕ್ಷೇತ್ರದ ರೂಪಾಂತರಕ್ಕೆ ನಕ್ಷೆಯಾಗಲಿದೆ. ಇದು ದೇಶದ ಭರವಸೆ ಎಂದೂ ಅವರು ಕೊಂಡಾಡಿದ್ದಾರೆ.</p>.<p>ಇನ್ನು ಎನ್ಡಿಎ–2ನ ಮೊದಲ ಬಜೆಟ್ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರೂ ಮಾತನಾಡಿದ್ದಾರೆ. ನವಭಾರತಕ್ಕಾಗಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಈ ಬಜೆಟ್ ಎಲ್ಲರ ಒಳಗೊಳ್ಳುವಿಕೆಗೆ ಮತ್ತು ಪ್ರಗತಿಗೆ ಅಡಿಗಲ್ಲು ಹಾಕಲಿದೆ. ಭಾರತದ ಕೃಷಿಕರು, ಯುವಕರು, ಮಹಿಳೆಯರು, ಬಡವರ ಅಗತ್ಯಗಳನ್ನು ಪೂರೈಸಲು ಇದು ಪೂರಕವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>