ಹಿಂದೂ ಮಕ್ಕಳ್ ಕಚ್ಚಿ ಮುಖ್ಯಸ್ಥ ಅರ್ಜುನ್ ಸಂಪತ್ ಮತ್ತು ಹಿಂದೂ ಮುನ್ನಾನಿ ಮುಖಂಡ ಮೂಕಾಂಬಿಕೈ ಮಣಿ ಹಾಗೂ ಇತರ ಮುಖಂಡರನ್ನು ಕೊಲ್ಲಲು ಸಂಚು ರೂಪಿಸಿದ್ದ ಮಾಹಿತಿ ಮೇರೆಗೆ ಸೆಪ್ಟೆಂಬರ್ನಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದರು. ಇವರಿಗೆ ಆಶ್ರಯ ನೀಡಿದ ಹಾಗೂ ಸಾರಿಗೆ ವ್ಯವಸ್ಥೆ ಮಾಡಿದ ಆರೋಪದಲ್ಲಿ ನಂತರ ಇಬ್ಬರನ್ನು ಬಂಧಿಸಲಾಗಿತ್ತು.