<p><strong>ಅಹಮದಾಬಾದ್</strong>: ಇರಾನ್ನಲ್ಲಿ ಸಿಲುಕಿರುವ ಭಾರತೀಯರನ್ನು ಗುಜರಾತ್ನ ಪೋರಬಂದರಿಗೆ ಕರೆತರಲು ಭಾರತೀಯ ನೌಕಾಪಡೆಯ ಹಡಗು ಐಎನ್ಎಸ್ ಶಾರ್ದೂಲ್ ಸೋಮವಾರ ಇರಾನ್ನ ಅಬ್ಬಾಸ್ ಬಂದರಿಗೆ ತಲುಪಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಕೊರೊನಾ ವೈರಸ್ ಕಾರಣಕ್ಕಾಗಿ ಪ್ರಯಾಣದ ನಿರ್ಬಂಧಕ್ಕೊಳಗಾಗಿ ಇರಾನ್ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು, ನೌಕಾಪಡೆಯು ಸೋಮವಾರ ‘ಆಪರೇಷನ್ ಸಮುದ್ರ ಸೇತು’ ಮುಂದಿನ ಹಂತವನ್ನು ಪ್ರಾರಂಭಿಸಿದೆ.</p>.<p>ಬಂದರಿನಲ್ಲಿ ಬೋರ್ಡಿಂಗ್ ಪ್ರಕ್ರಿಯೆಗಳು ಆರಂಭವಾಗಿವೆ. ಐಎನ್ಎಸ್ ಶಾರ್ದೂಲ್ ಶೀಘ್ರದಲ್ಲೇ ಭಾರತೀಯರನ್ನು ಗುಜರಾತಿನ ಪೋರಬಂದರಿಗೆ ಕರೆತರಲಿದೆ.</p>.<p>‘ಈ ಹಿಂದೆ ನೌಕಾಪಡೆಯ ಜಲಶ್ವ ಮತ್ತು ಮಗರ್ ಹಡಗುಗಳು ಮಾಲ್ಡೀವ್ಸ್ ಮತ್ತು ಶ್ರೀಲಂಕಾದಿಂದ 2,874 ಭಾರತೀಯರನ್ನು ಕೊಚ್ಚಿ ಮತ್ತು ಟ್ಯುಟಿಕೋರನ್ ಬಂದರಿಗೆಕರೆತಂದಿದ್ದವು’ ಎಂದು ಗುಜರಾತ್ ರಕ್ಷಣಾ ಪಿಆರ್ಒ ಪುನೀತ್ ಚಂದ್ರ ಮಾಹಿತಿ ನೀಡಿದ್ದಾರೆ.</p>.<p>ಕೊರೊನಾ ವೈರಸ್ ಸುರಕ್ಷಾ ಮಾರ್ಗಸೂಚಿಗಳ ಪ್ರಕಾರ, ಐಎನ್ಎಸ್ ಶಾರ್ದೂಲಾದಲ್ಲಿಬೋರ್ಡಿಂಗ್ಗೂ ಮುನ್ನವೇ ಎಲ್ಲರ ಆರೋಗ್ಯ ತಪಾಸಣೆ, ಅಂತರ ಕಾಪಾಡಿಕೊಳ್ಳುವಿಕೆ ಅನುಸರಿಸಲಾಗುವುದು ಎಂದು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊ ತಿಳಿಸಿದೆ.</p>.<p>ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬೇಕಾದ ಜೀವರಕ್ಷಕ ಸಾಧನಗಳು ಸೇರಿದಂತೆ ಪ್ರತ್ಯೇಕ ಐಸೋಲೇಷನ್ ವಿಭಾಗಗಳ ಸೌಲಭ್ಯಗಳನ್ನೂ ಹಡಗಿನಲ್ಲಿ ಒದಗಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್</strong>: ಇರಾನ್ನಲ್ಲಿ ಸಿಲುಕಿರುವ ಭಾರತೀಯರನ್ನು ಗುಜರಾತ್ನ ಪೋರಬಂದರಿಗೆ ಕರೆತರಲು ಭಾರತೀಯ ನೌಕಾಪಡೆಯ ಹಡಗು ಐಎನ್ಎಸ್ ಶಾರ್ದೂಲ್ ಸೋಮವಾರ ಇರಾನ್ನ ಅಬ್ಬಾಸ್ ಬಂದರಿಗೆ ತಲುಪಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಕೊರೊನಾ ವೈರಸ್ ಕಾರಣಕ್ಕಾಗಿ ಪ್ರಯಾಣದ ನಿರ್ಬಂಧಕ್ಕೊಳಗಾಗಿ ಇರಾನ್ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು, ನೌಕಾಪಡೆಯು ಸೋಮವಾರ ‘ಆಪರೇಷನ್ ಸಮುದ್ರ ಸೇತು’ ಮುಂದಿನ ಹಂತವನ್ನು ಪ್ರಾರಂಭಿಸಿದೆ.</p>.<p>ಬಂದರಿನಲ್ಲಿ ಬೋರ್ಡಿಂಗ್ ಪ್ರಕ್ರಿಯೆಗಳು ಆರಂಭವಾಗಿವೆ. ಐಎನ್ಎಸ್ ಶಾರ್ದೂಲ್ ಶೀಘ್ರದಲ್ಲೇ ಭಾರತೀಯರನ್ನು ಗುಜರಾತಿನ ಪೋರಬಂದರಿಗೆ ಕರೆತರಲಿದೆ.</p>.<p>‘ಈ ಹಿಂದೆ ನೌಕಾಪಡೆಯ ಜಲಶ್ವ ಮತ್ತು ಮಗರ್ ಹಡಗುಗಳು ಮಾಲ್ಡೀವ್ಸ್ ಮತ್ತು ಶ್ರೀಲಂಕಾದಿಂದ 2,874 ಭಾರತೀಯರನ್ನು ಕೊಚ್ಚಿ ಮತ್ತು ಟ್ಯುಟಿಕೋರನ್ ಬಂದರಿಗೆಕರೆತಂದಿದ್ದವು’ ಎಂದು ಗುಜರಾತ್ ರಕ್ಷಣಾ ಪಿಆರ್ಒ ಪುನೀತ್ ಚಂದ್ರ ಮಾಹಿತಿ ನೀಡಿದ್ದಾರೆ.</p>.<p>ಕೊರೊನಾ ವೈರಸ್ ಸುರಕ್ಷಾ ಮಾರ್ಗಸೂಚಿಗಳ ಪ್ರಕಾರ, ಐಎನ್ಎಸ್ ಶಾರ್ದೂಲಾದಲ್ಲಿಬೋರ್ಡಿಂಗ್ಗೂ ಮುನ್ನವೇ ಎಲ್ಲರ ಆರೋಗ್ಯ ತಪಾಸಣೆ, ಅಂತರ ಕಾಪಾಡಿಕೊಳ್ಳುವಿಕೆ ಅನುಸರಿಸಲಾಗುವುದು ಎಂದು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊ ತಿಳಿಸಿದೆ.</p>.<p>ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬೇಕಾದ ಜೀವರಕ್ಷಕ ಸಾಧನಗಳು ಸೇರಿದಂತೆ ಪ್ರತ್ಯೇಕ ಐಸೋಲೇಷನ್ ವಿಭಾಗಗಳ ಸೌಲಭ್ಯಗಳನ್ನೂ ಹಡಗಿನಲ್ಲಿ ಒದಗಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>