ಕಾಸರಗೋಡು: ಈಸ್ಟರ್ ದಿನದಂದು ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದನಾ ಕೃತ್ಯದ ರೂವಾರಿ ಸಹ್ರಾನ್ ಹಾಶಿಂ ಕೇರಳಕ್ಕೆ ಬಂದಿದ್ದಾನೆಎಂಬ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಕಾಸರಗೋಡು ಮತ್ತು ಪಾಲಕ್ಕಾಡ್ನಲ್ಲಿ ಶೋಧ ನಡೆಸಿದೆ.
NIA today carried out searches at three places in Kerala in connection with ISIS Kasaragod Module case. They are suspected to have links with some of accused in said case who left India to join terrorist organisation ISIS/ Daish. The 3 suspects are being questioned by NIA. pic.twitter.com/6bQtXkbIR8
Kerala: The searches by National Investigation Agency (NIA) in 2016 ISIS Kasaragod case were carried at the houses of three suspects, two in Kasaragod and one in Palakkad. https://t.co/Gk7wJQuPaQ
ಕಾಸರಗೋಡಿನಲ್ಲಿ ಎರಡು ಮನೆಗಳಲ್ಲಿ ಮತ್ತು ಪಾಲಕ್ಕಾಡ್ನ ಒಂದು ಪ್ರದೇಶದಲ್ಲಿ ತನಿಖಾ ಸಂಸ್ಥೆ ಶೋಧ ನಡೆಸಿದೆ.
ಕಾಸರಗೋಡಿನಲ್ಲಿ ಶೋಧ ನಡೆಸಿದ ನಂತರ ಅಲ್ಲಿನ ಇಬ್ಬರು ವ್ಯಕ್ತಿಗಳು ಕೊಚ್ಚಿಯ ಕಚೇರಿಗೆ ಬಂದು ಹಾಜರಾಗುವಂತೆ ಎನ್ಐಎ ಆದೇಶಿಸಿದೆ. ಈ ಇಬ್ಬರು ವ್ಯಕ್ತಿಗಳಿಂದ ಮೊಬೈಲ್ ಫೋನ್ ಮತ್ತು ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.
ಭಾಷಣಕಾರನಾಗಿರುವ ಸಹ್ರಾನ್ ಪದೇ ಪದೇ ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡುತ್ತಿರುತ್ತಾನೆ ಎಂದು ಶ್ರೀಲಂಕಾದ ಪ್ರಮುಖ ಇಂಗ್ಲಿಷ್ ಪತ್ರಿಕೆಯಾದ ಡೈಲಿ ಮಿರರ್ ವರದಿ ಮಾಡಿತ್ತು.
ಆಲುವಾ, ಪನಾಯಿಕುಳ ಮತ್ತು ಮಲಪ್ಪುರಂನಲ್ಲಿ ಸಹ್ರಾನ್ ಭಾಷಣ ಮಾಡಿದ್ದಎಂದು ವರದಿಯಲ್ಲಿ ಹೇಳಲಾಗಿದೆ. ಸರಣಿ ಸ್ಫೋಟ ನಡೆಸಿದನ್ಯಾಷನಲ್ ತೌಹೀದ್ ಜಮಾಅತ್ ಸಂಘಟನೆಯ ನೇತಾರನಾಗಿದ್ದಾನೆ ಸಹ್ರಾನ್ ಹಾಶಿಂ.