ಯಾರಾದರೂ ರಸ್ತೆ ಬದಿಯಲ್ಲಿ ಬಹಿರ್ದೆಸೆಗೆ ಹೋಗುತ್ತಿರುವುದು ಪತ್ತೆಯಾದರೆ, ಅವರಿಗೆ ಒಂದು ತಿಂಗಳು ಪಡಿತರ ವಿತರಿಸದಂತೆ ಪಂಚಾಯ್ತಿಯು ಸಂಬಂಧಿಸಿದ ಪಡಿತರ ವಿತರಕರಿಗೆ ಸೂಚಿಸುತ್ತದೆ. ಈ ಮೂಲಕವಾದರೂ ಜನರು ಶೌಚಾಲಯ ಬಳಸುವಂತಾಗಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಗೌತಮಿ ಪಂಚಾಯ್ತಿಯಲ್ಲಿ 2000 ಮನೆಗಳಿದ್ದು, 180 ಮನೆಗಳು ಶೌಚಾಲಯ ಹೊಂದಿಲ್ಲ. ಈ ಮನೆಗಳಲ್ಲೂ ಶೌಚಾಲಯ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.