ನವದೆಹಲಿ: ‘ಸಂವಿಧಾನದ ವಿಧಿ 370 ರದ್ದು ಕುರಿತ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಏಳು ಸದಸ್ಯರ ಉನ್ನತ ಪೀಠಕ್ಕೆ ಒಪ್ಪಿಸಲು ಯಾವುದೇ ಸಕಾರಣವಿಲ್ಲ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿತು.
ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಐವರು ಸದಸ್ಯರ ಪೀಠ ಈ ಆದೇಶ ಪ್ರಕಟಿಸಿತು.
ಸಲ್ಲಿಕೆಯಾಗಿರುವ ಅರ್ಜಿಗಳನ್ನು ಉನ್ನತ ಪೀಠದ ವಿಚಾರಣೆಗೆ ವಹಿಸಬೇಕೇ, ಬೇಡವೇ ಎಂಬ ಬಗ್ಗೆ ತೀರ್ಪನ್ನು ಕೋರ್ಟ್ ಜನವರಿ 23ರಂದು ಕಾದಿರಿಸಿತ್ತು.