<p><strong>ಬೆಂಗಳೂರು</strong>: ಭಾರತ ತಂಡದ ವಿಕೆಟ್ ಕೀಪರ್–ಬ್ಯಾಟರ್ ರಿಷಭ್ ಪಂತ್ ಸೇರಿದಂತೆ ದೆಹಲಿಯ ಪ್ರಮುಖ ಬ್ಯಾಟರ್ಗಳು ವಿಫಲರಾಗುವ ಮೂಲಕ ದೆಹಲಿ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಈ ಬಾರಿ ಮೊದಲ ಸೋಲು ಕಂಡಿತು.</p>.<p>ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ಒಡಿಶಾ ತಂಡವು ಬುಧವಾರ ನಡೆದ ‘ಡಿ’ ಗುಂಪಿನ ಈ ಪಂದ್ಯದಲ್ಲಿ 79 ರನ್ಗಳ ಸುಲಭ ಜಯ ಸಾಧಿಸಿತು. ಜನವರಿ ಮೊದಲ ಬಾರಿ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಗಾರರು ತಂಡ ಪ್ರಕಟಿಸಲು ಸಜ್ಜಾಗಿದ್ದು, ಪಂತ್ ಆಟದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು.</p>.<p>ಆದರೆ ಬೀಸುಹೊಡೆತಗಳ ಆಟಗಾರ 24 ರನ್ ಗಳಿಸಲಷ್ಟೇ ಶಕ್ತರಾದರು. ಒಡಿಶಾ ತಂಡದ 8 ವಿಕೆಟ್ಗೆ 272 ರನ್ಗಳಿಗೆ ಉತ್ತರವಾಗಿ ದೆಹಲಿ ತಂಡವು 43.3 ಓವರುಗಳಲ್ಲಿ 193 ರನ್ಗಳಿಗೆ ಆಲೌಟ್ ಆಯಿತು.</p>.<p>ಒಡಿಶಾ ಈ ಗೆಲುವಿನೊಡನೆ 12 ಪಾಯಿಂಟ್ಗಳೊಡನೆ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. ನಿವ್ವಳ ರನ್ ದರವೂ ಸುಧಾರಿಸಿದ ಕಾರಣ ಅದು ಇಷ್ಟೇ ಅಂಕ ಗಳಿಸಿದ ರೈಲ್ವೇಸ್, ಹರಿಯಾಣ ಮತ್ತು ದೆಹಲಿ ತಂಡಗಳನ್ನು ಹಿಂದೆಹಾಕಿತು.</p>.<p>ಪಂತ್ ಈ ಟೂರ್ನಿಯಲ್ಲಿ 5, 70, 22 ಮತ್ತು 24 ರನ್ಗಳನ್ನಷ್ಟೇ ಗಳಿಸಿದ್ದಾರೆ. ಮಧ್ಯಮ ವೇಗಿ ದೇವವ್ರತ ಪ್ರಧಾನ್ (28ಕ್ಕೆ3) ಮತ್ತು ಸಂಬಿತ್ ಬರಲ್ (34ಕ್ಕೆ3) ದೆಹಲಿ ಕುಸಿತಕ್ಕೆ ಕಾರಣರಾದರು.</p>.<p>ಒಡಿಶಾ ಪರ ನಾಯಕ ಬಿಪ್ಲಬ್ ಸಮಂತರಾಯ್ 72 ಎಸೆತಗಳಲ್ಲಿ 74 ರನ್ ಗಳಿಸಿ ಮಿಂಚಿದರು.</p>.<p><strong>ಸ್ಕೋರುಗಳು</strong>: </p><p>ಒಡಿಶಾ: 50 ಓವರುಗಳಲ್ಲಿ 8ಕ್ಕೆ 272 (ಓಂ ಟಿ.ಮುಂಢೆ 26, ಸ್ವಸ್ತಿಕ್ ಸಮಾಲ್ 28, ಗೋವಿಂದ ಪೊದ್ದಾರ್ 35, ಬಿಪ್ಲಬ್ ಸಮಂತರಾಯ್ 72; ಪ್ರಿನ್ಸ್ ಯಾದವ್ 57ಕ್ಕೆ2, ಹೃತಿಕ್ ಶೊಕೀನ್ 27ಕ್ಕೆ4); </p><p>ದೆಹಲಿ: 42.3 ಓವರುಗಳಲ್ಲಿ 193 (ಆಯುಷ್ ದೊಸೇಜ 28, ರಿಷಭ್ ಪಂತ್ 24, ಹರ್ಷ್ ತ್ಯಾಗಿ 43, ಹೃತಿಕ್ ಶೊಕೀನ್ 32, ದಿವಿಜ್ ಮೆಹ್ರಾ 27; ರಾಜೇಶ್ ಮೊಹಾಂತಿ 42ಕ್ಕೆ2, ದೇವವ್ರತ ಪ್ರಧಾನ್ 28ಕ್ಕೆ3, ಸಂಬಿತ್ ಬರಲ್ 34ಕ್ಕೆ3). ಪಂದ್ಯದ ಆಟಗಾರ: ಬಿಪ್ಲಬ್ ಸಮಂತರಾಯ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಭಾರತ ತಂಡದ ವಿಕೆಟ್ ಕೀಪರ್–ಬ್ಯಾಟರ್ ರಿಷಭ್ ಪಂತ್ ಸೇರಿದಂತೆ ದೆಹಲಿಯ ಪ್ರಮುಖ ಬ್ಯಾಟರ್ಗಳು ವಿಫಲರಾಗುವ ಮೂಲಕ ದೆಹಲಿ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಈ ಬಾರಿ ಮೊದಲ ಸೋಲು ಕಂಡಿತು.</p>.<p>ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ಒಡಿಶಾ ತಂಡವು ಬುಧವಾರ ನಡೆದ ‘ಡಿ’ ಗುಂಪಿನ ಈ ಪಂದ್ಯದಲ್ಲಿ 79 ರನ್ಗಳ ಸುಲಭ ಜಯ ಸಾಧಿಸಿತು. ಜನವರಿ ಮೊದಲ ಬಾರಿ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಗಾರರು ತಂಡ ಪ್ರಕಟಿಸಲು ಸಜ್ಜಾಗಿದ್ದು, ಪಂತ್ ಆಟದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು.</p>.<p>ಆದರೆ ಬೀಸುಹೊಡೆತಗಳ ಆಟಗಾರ 24 ರನ್ ಗಳಿಸಲಷ್ಟೇ ಶಕ್ತರಾದರು. ಒಡಿಶಾ ತಂಡದ 8 ವಿಕೆಟ್ಗೆ 272 ರನ್ಗಳಿಗೆ ಉತ್ತರವಾಗಿ ದೆಹಲಿ ತಂಡವು 43.3 ಓವರುಗಳಲ್ಲಿ 193 ರನ್ಗಳಿಗೆ ಆಲೌಟ್ ಆಯಿತು.</p>.<p>ಒಡಿಶಾ ಈ ಗೆಲುವಿನೊಡನೆ 12 ಪಾಯಿಂಟ್ಗಳೊಡನೆ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. ನಿವ್ವಳ ರನ್ ದರವೂ ಸುಧಾರಿಸಿದ ಕಾರಣ ಅದು ಇಷ್ಟೇ ಅಂಕ ಗಳಿಸಿದ ರೈಲ್ವೇಸ್, ಹರಿಯಾಣ ಮತ್ತು ದೆಹಲಿ ತಂಡಗಳನ್ನು ಹಿಂದೆಹಾಕಿತು.</p>.<p>ಪಂತ್ ಈ ಟೂರ್ನಿಯಲ್ಲಿ 5, 70, 22 ಮತ್ತು 24 ರನ್ಗಳನ್ನಷ್ಟೇ ಗಳಿಸಿದ್ದಾರೆ. ಮಧ್ಯಮ ವೇಗಿ ದೇವವ್ರತ ಪ್ರಧಾನ್ (28ಕ್ಕೆ3) ಮತ್ತು ಸಂಬಿತ್ ಬರಲ್ (34ಕ್ಕೆ3) ದೆಹಲಿ ಕುಸಿತಕ್ಕೆ ಕಾರಣರಾದರು.</p>.<p>ಒಡಿಶಾ ಪರ ನಾಯಕ ಬಿಪ್ಲಬ್ ಸಮಂತರಾಯ್ 72 ಎಸೆತಗಳಲ್ಲಿ 74 ರನ್ ಗಳಿಸಿ ಮಿಂಚಿದರು.</p>.<p><strong>ಸ್ಕೋರುಗಳು</strong>: </p><p>ಒಡಿಶಾ: 50 ಓವರುಗಳಲ್ಲಿ 8ಕ್ಕೆ 272 (ಓಂ ಟಿ.ಮುಂಢೆ 26, ಸ್ವಸ್ತಿಕ್ ಸಮಾಲ್ 28, ಗೋವಿಂದ ಪೊದ್ದಾರ್ 35, ಬಿಪ್ಲಬ್ ಸಮಂತರಾಯ್ 72; ಪ್ರಿನ್ಸ್ ಯಾದವ್ 57ಕ್ಕೆ2, ಹೃತಿಕ್ ಶೊಕೀನ್ 27ಕ್ಕೆ4); </p><p>ದೆಹಲಿ: 42.3 ಓವರುಗಳಲ್ಲಿ 193 (ಆಯುಷ್ ದೊಸೇಜ 28, ರಿಷಭ್ ಪಂತ್ 24, ಹರ್ಷ್ ತ್ಯಾಗಿ 43, ಹೃತಿಕ್ ಶೊಕೀನ್ 32, ದಿವಿಜ್ ಮೆಹ್ರಾ 27; ರಾಜೇಶ್ ಮೊಹಾಂತಿ 42ಕ್ಕೆ2, ದೇವವ್ರತ ಪ್ರಧಾನ್ 28ಕ್ಕೆ3, ಸಂಬಿತ್ ಬರಲ್ 34ಕ್ಕೆ3). ಪಂದ್ಯದ ಆಟಗಾರ: ಬಿಪ್ಲಬ್ ಸಮಂತರಾಯ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>