ಇದು ದೇಶದಲ್ಲಿಯೇ ಲಾಕ್ಡೌನ್ ಮುಂದುವರಿಸಿ ಜಾರಿ ಮಾಡಿರುವ ಮೊದಲ ರಾಜ್ಯ ಒಡಿಶಾ. ಅಲ್ಲದೆ, ಕೇಂದ್ರ ಕೂಡ ಇದೇ ಮಾದರಿ ಅನುಸರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಕೊರೊನಾ ಸೋಂಕು ಹೆಚ್ಚು ಹರಡುವುದನ್ನು ತಪ್ಪಿಸಲುರೈಲು ಹಾಗೂ ವಿಮಾನ ಯಾನ ಆರಂಭ ಮಾಡದಂತೆ ಮನವಿ ಮಾಡಿದ್ದಾರೆ.ಒಡಿಶಾದಲ್ಲಿ ಈಗಾಗಲೇ ಶಿಕ್ಷಣ ಸಂಸ್ಥೆಗಳನ್ನು ಜೂನ್ 17ರವರೆಗೆ ಮುಚ್ಚುವಂತೆ ಆದೇಶಿಸಿರುವ ಪಟ್ನಾಯಕ್, ಶತಮಾನಕ್ಕೂ ಹೆಚ್ಚು ಕಾಲದ ನಂತರ ಮಾನವನಿಗೆ ಇದೊಂದು ಬೃಹತ್ ಬೆದರಿಕೆಯಾಗಿದೆ.