ಅದೇ ವೇಳೆ ದೇವರ ದರ್ಶನ ಪಡೆಯಲು ಬರುವ ಮಹಿಳೆಯರಿಗೆ ಭದ್ರತೆ ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿಲ್ಲ ಎಂದು ಸಚಿವರು ಹೇಳಿದ್ದಾರೆ.
ಶಬರಿಮಲೆಯ ಅರ್ಚಕರು ದೇವಸ್ವಂ ನೌಕರ ಅಲ್ಲ, ದೇವಸ್ವಂ ಕೈಪಿಡಿ ಪ್ರಕಾರ ಇನ್ನಿತರ ನೌಕರರಂತೆ ಶಬರಿಮಲೆ ಅರ್ಚಕರು ಕೆಲಸ ಮಾಡೇಬೇಕು.ದೇವಾಲಯದಲ್ಲಿ ಸಂಪ್ರದಾಯ ಉಲ್ಲಂಘನೆಯಾದರೆ ಬಾಗಿಲು ಮುಚ್ಚಿ ಶುದ್ಧಿ ಕೆಲಸ ಮಾಡಬೇಕೆಂದು ದೇವಸ್ವಂ ಕೈಪಿಡಿಯಲ್ಲಿ ಹೇಳಲಿಲ್ಲ.ಶುದ್ಧಿಕ್ರಿಯೆ ಅಗತ್ಯವಾದರೆ ದೇವಸ್ವಂ ಮಂಡಳಿ ಜತೆ ಸಮಾಲೋಚನೆ ನಡೆಸಿ ಅದನ್ನು ಮಾಡಬೇಕು. ಆದರೆ ಕಳೆದ ಬಾರಿ ಶುದ್ಧಿಕ್ರಿಯೆ ನಡೆಸಿದಾಗ ಈ ರೀತಿ ಅನುಮತಿ ಪಡೆದಿಲ್ಲ ಎಂದು ಸಚಿವರು ಹೇಳಿದ್ದಾರೆ.