ತಿರುವಾಭರಣವನ್ನು ವಾಪಸ್ ತರುವುದು ಕೇರಳ ಸರ್ಕಾರದ ಹೊಣೆ, ಕೆಲವೊಂದು ವಿಶೇಷ ಆಭರಣಗಳು, ಅಮೂಲ್ಯವಾದ ಆಭರಣಗಳನ್ನು ವಿಗ್ರಹಕ್ಕೆ ತೊಡಿಸುವುದಿಲ್ಲವೇ? ಎಂದು ಅಷ್ಟಮಂಗ ಪ್ರಶ್ನೆಯಲ್ಲಿ ಕೇಳಲಾಗಿತ್ತು.ಮರಕತ, ವೈಢೂರ್ಯ ಪೋಣಿಸಿದ್ದ ಆಭರಣಗಳಾಗಿದ್ದವು. ವಾಚಿ ಎಂಬ ಚಿನ್ನದ ಕುದುರೆ ನಷ್ಟ ಆಗಿದೆ ಎಂಬುದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಾಣಿಸಿಕೊಂಡಿತ್ತು ಎಂದು ತಿರುವನಂತಪುರಂ ಪ್ರೆಸ್ ಕ್ಲಬ್ ಆಯೋಜಿಸಿದ ಮುಖಾಮುಖಂ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದೀಪಾನಂದಗಿರಿ ಆರೋಪಿಸಿರುವುದಾಗಿ ಮಲಯಾಳ ಮನೋರಮ ಪತ್ರಿಕೆ ವರದಿ ಮಾಡಿದೆ.