ಸಂಸತ್ತಿನ ಉಭಯ ಸದನಗಳ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಲೋಕಸಭೆಯಲ್ಲಿಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಕಲಾಪದಿಂದ ಹೊರನಡೆದು ಪ್ರತಿಭಟಿಸಿವೆ.ಜಮ್ಮು–ಕಾಶ್ಮೀರದಲ್ಲಿನ ನಿರ್ಬಂಧ ಹೇರಿಕೆ ಮತ್ತು ನಾಯಕರ ಬಂಧನವನ್ನು ಪ್ರಶ್ನಿಸಿ ಉಭಯ ಪಕ್ಷಗಳು ಕಲಾಪ ಬಹಿಷ್ಕರಿಸಿವೆ. ಇದಕ್ಕೂ ಮುನ್ನಮಹಾರಾಷ್ಟ್ರದಲ್ಲಿ ರೈತರ ಸಂಕಷ್ಟ ವಿಷಯ ಪ್ರಸ್ತಾಪಿಸಿ ಶಿವಸೇನಾ ಸಂಸದರು ಕಲಾಪದಿಂದ ಹೊರನಡೆದಿದ್ದರು.