ಸಾಧ್ವಿ ಪ್ರಜ್ಞಾ ಹೇಳಿಕೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಕರ್ಕರೆ ಶಿಷ್ಯನಾಗಿ ನಾನು ಸೇವೆ ಸಲ್ಲಿಸಿದ್ದೇನೆ. ಆದ್ದರಿಂದಲೇ ನಾನು ಪ್ರಜ್ಞಾ ವಿರುದ್ಧ ಸ್ಪರ್ಧಿಸುತ್ತಿದ್ದೇನೆ ಎಂದು 60 ವರ್ಷದ ರಿಯಾಜುದ್ದೀನ್ ದೇಶಮುಖ್ ತಿಳಿಸಿದ್ದಾರೆ.1998ರಲ್ಲಿ ಅಕೋಲಾದಲ್ಲಿ ಎಸ್ಪಿಯಾಗಿದ್ದ ಹೇಮಂತ್ ಕರ್ಕರೆ ಅವರ ಜೊತೆ ನಾನು ಸಬ್ ಇನ್ಸ್ಪೆಕ್ಟರ್ ಆಗಿ ಸೇವೆಸಲ್ಲಿಸಿರುವೆ. ನನಗೆ ಅವರು ಗುರುಗಳಾಗಿದ್ದರು. ನಾನು ಅವರ ನಿಕಟವರ್ತಿಯಾಗಿದ್ದೆ, ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಇಂತಹವರ ವಿರುದ್ಧ ಹೇಳಿಕೆ ನೀಡಿದ್ದು ನಾನು ಚುನಾವಣೆಯಲ್ಲಿ ನಿಲ್ಲುವಂತೆ ಮಾಡಿತು ಎಂದು ದೇಶಮುಖ್ ಹೇಳಿದರು.