<p class="title"><strong>ನೊಯಿಡಾ:</strong> ಸತತ 13 ಗಂಟೆಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡಿ ಬಳಲಿದ ಗರ್ಭಿಣಿಯೊಬ್ಬರು ಆಂಬುಲೆನ್ಸ್ನಲ್ಲೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೊಯಿಡಾದಲ್ಲಿ ನಡೆದಿದೆ.</p>.<p class="bodytext">ಚಿಕಿತ್ಸೆಗಾಗಿ ಒಂದೊಂದು ಆಸ್ಪತ್ರೆಯನ್ನೂ ತಲುಪಿದಾಗ, ‘ಬೆಡ್ ಖಾಲಿಯಿಲ್ಲ. ಚಿಕಿತ್ಸೆ ನೀಡಲು ಸಾಧ್ಯವಿಲ್ಲ’ ಎಂಬ ಉತ್ತರ ಸಿಗುತ್ತಿತ್ತು. ಸರ್ಕಾರಿ ಆಸ್ಪತ್ರೆಯೂ ಸೇರಿದಂತೆ ಒಟ್ಟು 8 ಆಸ್ಪತ್ರೆಗಳಿಗೆ ಎಡತಾಕಿದ ನೀಲಂ (30) ಅವರು ಕೊನೆಗೆ ಆಂಬುಲೆನ್ಸ್ನಲ್ಲೇ ಪ್ರಾಣ ಕಳೆದುಕೊಂಡರು.</p>.<p class="bodytext">ಗರ್ಭಿಣಿಯ ಪತಿ ವಿಜೇಂದ್ರ ಸಿಂಗ್ ಅವರ ಹೇಳಿಕೆ ಆಧರಿಸಿ, ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಗೌತಮಬುದ್ಧ ನಗರ ಜಿಲ್ಲಾಡಳಿತ, ತನಿಖೆಗೆ ಆದೇಶಿಸಿದೆ.</p>.<p class="bodytext"><strong>ಇದನ್ನೂ ಓದಿ:</strong><a href="https://www.prajavani.net/stories/national/amul-vs-china-trending-on-twitter-734245.html" itemprop="url">ಟ್ವಿಟರ್ನಲ್ಲಿ ಅಮೂಲ್ vs ಚೀನಾ!</a></p>.<p class="bodytext">ನೊಯಿಡಾ–ಗಾಜಿಯಾಬಾದ್ ಗಡಿಯ ಖೋಡಾ ಕಾಲೊನಿ ನಿವಾಸಿಯಾದ ನೀಲಂ ಅವರು ಆಗಾಗ್ಗೆ ತಪಾಸಣೆಗೆ ಹೋಗಿಬರುತ್ತಿದ್ದ ಶಿವಾಲಿಕ್ ಆಸ್ಪತ್ರೆಯಲ್ಲೂ ಚಿಕಿತ್ಸೆ ನಿರಾಕರಿಲಾಯಿತು. ಶುಕ್ರವಾರ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಅಲ್ಲಿನ ವೈದ್ಯರು ನಿರಾಕರಿಸಿದ ಬಳಿಕ ಪ್ರತಿಯೊಂದು ಆಸ್ಪತ್ರೆಗಳಿಗೆ ಅಲೆದಾಡಬೇಕಾಯಿತುಎಂದು ವಿಜೇಂದ್ರ ಸಿಂಗ್ ಹೇಳಿದ್ದಾರೆ.</p>.<p class="bodytext">ಜೇಪಿ, ಮ್ಯಾಕ್ಸ್ ಮೊದಲಾದ ಆಸ್ಪತ್ರೆಗಳಿಗೆ ಅಲೆದಾಡಿದ ಬಳಿಕ ಜಿಐಎಂಎಸ್ನಲ್ಲಿ ಕೊನೆಯ ಪ್ರಯತ್ನವಾಗಿ ವೆಂಟಿಲೇಟರ್ ಅಳವಡಿಸಲಾಯಿತು. ಅಷ್ಟೊತ್ತಿಗೆ ಕಾಲ ಮಿಂಚಿತ್ತು ಎಂದು ಸಿಂಗ್ ಹೇಳಿದ್ದಾರೆ.</p>.<p class="bodytext">ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಮುನೀಂದ್ರನಾಥ ಉಪಾಧ್ಯಾಯ ಹಾಗೂ ಮುಖ್ಯ ಆರೋಗ್ಯಾಧಿಕಾರಿ ದೀಪಕ್ ಒಹ್ರಿ ಅವರು ತನಿಖೆ ಕೈಗೊಂಡಿದ್ದಾರೆ. ಜಿಲ್ಲಾಡಳಿತವೂ ತನಿಖೆ ನಡೆಸುತ್ತಿದ್ದು, ಚಿಕಿತ್ಸೆ ನಿರಾಕರಿಸಿ ನಿರ್ಲಕ್ಷ್ಯ ತೋರಿದ ಎರಡು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದೆ.</p>.<p class="bodytext">15 ದಿನಗಳ ಅವಧಿಯಲ್ಲಿ ಇದು ಎರಡನೇ ಪ್ರಕರಣವಾಗಿದೆ.ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ದೊರೆಯದೇ ನವಜಾತ ಶಿಶುವೊಂದು ಗೌತಮಬುದ್ಧ ನಗರದಲ್ಲಿ ಮೇ 25ರಂದು ಮೃತಪಟ್ಟಿತ್ತು. ಮಗುವಿನ ತಂದೆಯು ಅಂದು ರಾತ್ರಿ ಗ್ರೇಟರ್ ನೋಯಿಡಾದಿಂದ ನೊಯಿಡಾದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಅಲೆದಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನೊಯಿಡಾ:</strong> ಸತತ 13 ಗಂಟೆಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡಿ ಬಳಲಿದ ಗರ್ಭಿಣಿಯೊಬ್ಬರು ಆಂಬುಲೆನ್ಸ್ನಲ್ಲೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೊಯಿಡಾದಲ್ಲಿ ನಡೆದಿದೆ.</p>.<p class="bodytext">ಚಿಕಿತ್ಸೆಗಾಗಿ ಒಂದೊಂದು ಆಸ್ಪತ್ರೆಯನ್ನೂ ತಲುಪಿದಾಗ, ‘ಬೆಡ್ ಖಾಲಿಯಿಲ್ಲ. ಚಿಕಿತ್ಸೆ ನೀಡಲು ಸಾಧ್ಯವಿಲ್ಲ’ ಎಂಬ ಉತ್ತರ ಸಿಗುತ್ತಿತ್ತು. ಸರ್ಕಾರಿ ಆಸ್ಪತ್ರೆಯೂ ಸೇರಿದಂತೆ ಒಟ್ಟು 8 ಆಸ್ಪತ್ರೆಗಳಿಗೆ ಎಡತಾಕಿದ ನೀಲಂ (30) ಅವರು ಕೊನೆಗೆ ಆಂಬುಲೆನ್ಸ್ನಲ್ಲೇ ಪ್ರಾಣ ಕಳೆದುಕೊಂಡರು.</p>.<p class="bodytext">ಗರ್ಭಿಣಿಯ ಪತಿ ವಿಜೇಂದ್ರ ಸಿಂಗ್ ಅವರ ಹೇಳಿಕೆ ಆಧರಿಸಿ, ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಗೌತಮಬುದ್ಧ ನಗರ ಜಿಲ್ಲಾಡಳಿತ, ತನಿಖೆಗೆ ಆದೇಶಿಸಿದೆ.</p>.<p class="bodytext"><strong>ಇದನ್ನೂ ಓದಿ:</strong><a href="https://www.prajavani.net/stories/national/amul-vs-china-trending-on-twitter-734245.html" itemprop="url">ಟ್ವಿಟರ್ನಲ್ಲಿ ಅಮೂಲ್ vs ಚೀನಾ!</a></p>.<p class="bodytext">ನೊಯಿಡಾ–ಗಾಜಿಯಾಬಾದ್ ಗಡಿಯ ಖೋಡಾ ಕಾಲೊನಿ ನಿವಾಸಿಯಾದ ನೀಲಂ ಅವರು ಆಗಾಗ್ಗೆ ತಪಾಸಣೆಗೆ ಹೋಗಿಬರುತ್ತಿದ್ದ ಶಿವಾಲಿಕ್ ಆಸ್ಪತ್ರೆಯಲ್ಲೂ ಚಿಕಿತ್ಸೆ ನಿರಾಕರಿಲಾಯಿತು. ಶುಕ್ರವಾರ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಅಲ್ಲಿನ ವೈದ್ಯರು ನಿರಾಕರಿಸಿದ ಬಳಿಕ ಪ್ರತಿಯೊಂದು ಆಸ್ಪತ್ರೆಗಳಿಗೆ ಅಲೆದಾಡಬೇಕಾಯಿತುಎಂದು ವಿಜೇಂದ್ರ ಸಿಂಗ್ ಹೇಳಿದ್ದಾರೆ.</p>.<p class="bodytext">ಜೇಪಿ, ಮ್ಯಾಕ್ಸ್ ಮೊದಲಾದ ಆಸ್ಪತ್ರೆಗಳಿಗೆ ಅಲೆದಾಡಿದ ಬಳಿಕ ಜಿಐಎಂಎಸ್ನಲ್ಲಿ ಕೊನೆಯ ಪ್ರಯತ್ನವಾಗಿ ವೆಂಟಿಲೇಟರ್ ಅಳವಡಿಸಲಾಯಿತು. ಅಷ್ಟೊತ್ತಿಗೆ ಕಾಲ ಮಿಂಚಿತ್ತು ಎಂದು ಸಿಂಗ್ ಹೇಳಿದ್ದಾರೆ.</p>.<p class="bodytext">ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಮುನೀಂದ್ರನಾಥ ಉಪಾಧ್ಯಾಯ ಹಾಗೂ ಮುಖ್ಯ ಆರೋಗ್ಯಾಧಿಕಾರಿ ದೀಪಕ್ ಒಹ್ರಿ ಅವರು ತನಿಖೆ ಕೈಗೊಂಡಿದ್ದಾರೆ. ಜಿಲ್ಲಾಡಳಿತವೂ ತನಿಖೆ ನಡೆಸುತ್ತಿದ್ದು, ಚಿಕಿತ್ಸೆ ನಿರಾಕರಿಸಿ ನಿರ್ಲಕ್ಷ್ಯ ತೋರಿದ ಎರಡು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದೆ.</p>.<p class="bodytext">15 ದಿನಗಳ ಅವಧಿಯಲ್ಲಿ ಇದು ಎರಡನೇ ಪ್ರಕರಣವಾಗಿದೆ.ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ದೊರೆಯದೇ ನವಜಾತ ಶಿಶುವೊಂದು ಗೌತಮಬುದ್ಧ ನಗರದಲ್ಲಿ ಮೇ 25ರಂದು ಮೃತಪಟ್ಟಿತ್ತು. ಮಗುವಿನ ತಂದೆಯು ಅಂದು ರಾತ್ರಿ ಗ್ರೇಟರ್ ನೋಯಿಡಾದಿಂದ ನೊಯಿಡಾದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಅಲೆದಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>