‘ಬಿಜೆಪಿಯವರು ಸದಾ ಹಿಂದುತ್ವದ ಬಗ್ಗೆ ಮಾತನಾಡುತ್ತಿರುತ್ತಾರೆ. ಹಿಂದುತ್ವದಲ್ಲಿ ಗುರುವೇ ಸರ್ವೋತ್ತಮ. ಹಿಂದುತ್ವವು ಗುರು–ಶಿಷ್ಯ ಪರಂಪರೆಯ ಬಗ್ಗೆ ಮಾತನಾಡುತ್ತದೆ. ಮೋದಿ ಅವರ ಗುರು ಯಾರು? ಅಡ್ವಾಣಿ ಅಲ್ಲವೇ. ಮೋದಿ ಅವರು ಅಡ್ವಾಣಿ ಅವರನ್ನು ಒದ್ದು, ವೇದಿಕೆಯಿಂದ ಕೆಳಕ್ಕೆ ದೂಡಿದ್ದಾರೆ. ಹಿಂದುತ್ವದಲ್ಲಿ ಗುರುವಿಗೆ ಅಪಾರ ಗೌರವ ನೀಡಲಾಗುತ್ತದೆ. ಆದರೆ ಅಡ್ವಾಣಿ ಅವರಿಗೆ ಗೌರವವೇ ಸಿಗುತ್ತಿಲ್ಲ. ಇದು ಹಿಂದುತ್ವವೇ’ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.