<p><strong>ನವದೆಹಲಿ: </strong>ರಾಜ್ಯಸಭೆಯ 19 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿಬಿಜೆಪಿ ಎಂಟು ಮತ್ತು ಹಾಗೂಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡವು. </p>.<p>ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾದಜೋತಿರಾದಿತ್ಯ ಸಿಂಧಿಯಾ ಅದೇ ರಾಜ್ಯದಿಂದ ಅನಾಯಾಸವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ರಾಜಸ್ಥಾನದಲ್ಲಿ ಆಪರೇಷನ್ ಕಮಲದ ಆತಂಕದಲ್ಲಿದ್ದ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗಳಿಸುವ ಮೂಲಕ ನಿಟ್ಟುಸಿರು ಬಿಟ್ಟಿದೆ.</p>.<p>ಮಧ್ಯಪ್ರದೇಶದಲ್ಲಿ ಬಿಜೆಪಿಯ ಸುಮೀರ್ ಸಿಂಗ್ ಹಾಗೂಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆಯ್ಕೆ<br />ಯಾಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು<br />ಗೋಪಾಲ್ ಅವರು ರಾಜಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ನ ನೀರಜ್ ದಾಂಗಿ ಹಾಗೂ ಬಿಜೆಪಿಯ ರಾಜೇಂದ್ರ ಗೆಹ್ಲೋಟ್ ಗೆದ್ದರು.</p>.<p class="Subhead"><strong>ನಾಲ್ಕೂ ಸ್ಥಾನ ಗೆದ್ದ ವೈಎಸ್ಆರ್ಸಿಪಿ:</strong>ಆಂಧ್ರಪ್ರದೇಶದ ನಾಲ್ಕೂ ಸ್ಥಾನಗಳನ್ನು ವೈಎಸ್ಆರ್ಸಿಪಿ ಗೆದ್ದುಕೊಂಡಿದೆ. ಸಚಿವರಾಗಿರುವ ಮೋಪಿದೇವಿ ವೆಂಕಟರಮಣ, ಪಿಳ್ಳಿ ಸುಭಾಷ್ ಚಂದ್ರ ಬೋಸ್, ಕೈಗಾರಿಕೋದ್ಯಮಿಗಳಾದ ಅಲ್ಲ ಅಯೋಧ್ಯ ರಾಮಿ ರೆಡ್ಡಿ ಹಾಗೂ ಪರಿಮಳ ನಥವಾಣಿ ರಾಜ್ಯಸಭೆಗೆ ಆಯ್ಕೆಯಾದರು. </p>.<p class="Subhead"><strong>ಪಕ್ಷದ ಮುಖ್ಯಸ್ಥರು ರಾಜ್ಯಸಭೆಗೆ: </strong>ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್(30) ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೀಪಕ್ ಪ್ರಕಾಶ್(31) ಜಾರ್ಖಂಡನ್ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ಸೊರೇನ್, ರಾಜ್ಯಸಭೆಗೆ ಮೂರನೇ ಬಾರಿ ಪ್ರವೇಶಿಸುತ್ತಿದ್ದಾರೆ.</p>.<p>ಮಣಿಪುರದಲ್ಲಿ ಆಡಳಿತರೂಢ ಮೈತ್ರಿ ಕೂಟದಲ್ಲಿರುವ ಒಂಬತ್ತು ಶಾಸಕರು ಬಂಡಾಯವೆದ್ದಿದ್ದರೂ, ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಗಿದೆ. ಇಲ್ಲಿಂದ ಲಿಸೆಂಬಾ ಸಂಜೊಬಾ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ಈಶಾನ್ಯ ರಾಜ್ಯ<br />ಗಳಾದ ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಕ್ಷದ ವ್ಯಾನ್ವಿರಾಯ್ ಖರ್ಲುಖಿ ಗೆದ್ದರೆ, ಮಿಜೊರಾಂನಿಂದ ಮಿಜೊ ನ್ಯಾಷನಲ್<br />ಫ್ರಂಟ್ನ ಅಭ್ಯರ್ಥಿ ಕೆ.ಕನ್ಲಾವೆನ ಆಯ್ಕೆಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ರಾಜ್ಯಸಭೆಯ 19 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿಬಿಜೆಪಿ ಎಂಟು ಮತ್ತು ಹಾಗೂಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡವು. </p>.<p>ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾದಜೋತಿರಾದಿತ್ಯ ಸಿಂಧಿಯಾ ಅದೇ ರಾಜ್ಯದಿಂದ ಅನಾಯಾಸವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ರಾಜಸ್ಥಾನದಲ್ಲಿ ಆಪರೇಷನ್ ಕಮಲದ ಆತಂಕದಲ್ಲಿದ್ದ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗಳಿಸುವ ಮೂಲಕ ನಿಟ್ಟುಸಿರು ಬಿಟ್ಟಿದೆ.</p>.<p>ಮಧ್ಯಪ್ರದೇಶದಲ್ಲಿ ಬಿಜೆಪಿಯ ಸುಮೀರ್ ಸಿಂಗ್ ಹಾಗೂಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆಯ್ಕೆ<br />ಯಾಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು<br />ಗೋಪಾಲ್ ಅವರು ರಾಜಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ನ ನೀರಜ್ ದಾಂಗಿ ಹಾಗೂ ಬಿಜೆಪಿಯ ರಾಜೇಂದ್ರ ಗೆಹ್ಲೋಟ್ ಗೆದ್ದರು.</p>.<p class="Subhead"><strong>ನಾಲ್ಕೂ ಸ್ಥಾನ ಗೆದ್ದ ವೈಎಸ್ಆರ್ಸಿಪಿ:</strong>ಆಂಧ್ರಪ್ರದೇಶದ ನಾಲ್ಕೂ ಸ್ಥಾನಗಳನ್ನು ವೈಎಸ್ಆರ್ಸಿಪಿ ಗೆದ್ದುಕೊಂಡಿದೆ. ಸಚಿವರಾಗಿರುವ ಮೋಪಿದೇವಿ ವೆಂಕಟರಮಣ, ಪಿಳ್ಳಿ ಸುಭಾಷ್ ಚಂದ್ರ ಬೋಸ್, ಕೈಗಾರಿಕೋದ್ಯಮಿಗಳಾದ ಅಲ್ಲ ಅಯೋಧ್ಯ ರಾಮಿ ರೆಡ್ಡಿ ಹಾಗೂ ಪರಿಮಳ ನಥವಾಣಿ ರಾಜ್ಯಸಭೆಗೆ ಆಯ್ಕೆಯಾದರು. </p>.<p class="Subhead"><strong>ಪಕ್ಷದ ಮುಖ್ಯಸ್ಥರು ರಾಜ್ಯಸಭೆಗೆ: </strong>ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್(30) ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೀಪಕ್ ಪ್ರಕಾಶ್(31) ಜಾರ್ಖಂಡನ್ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ಸೊರೇನ್, ರಾಜ್ಯಸಭೆಗೆ ಮೂರನೇ ಬಾರಿ ಪ್ರವೇಶಿಸುತ್ತಿದ್ದಾರೆ.</p>.<p>ಮಣಿಪುರದಲ್ಲಿ ಆಡಳಿತರೂಢ ಮೈತ್ರಿ ಕೂಟದಲ್ಲಿರುವ ಒಂಬತ್ತು ಶಾಸಕರು ಬಂಡಾಯವೆದ್ದಿದ್ದರೂ, ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಗಿದೆ. ಇಲ್ಲಿಂದ ಲಿಸೆಂಬಾ ಸಂಜೊಬಾ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ಈಶಾನ್ಯ ರಾಜ್ಯ<br />ಗಳಾದ ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಕ್ಷದ ವ್ಯಾನ್ವಿರಾಯ್ ಖರ್ಲುಖಿ ಗೆದ್ದರೆ, ಮಿಜೊರಾಂನಿಂದ ಮಿಜೊ ನ್ಯಾಷನಲ್<br />ಫ್ರಂಟ್ನ ಅಭ್ಯರ್ಥಿ ಕೆ.ಕನ್ಲಾವೆನ ಆಯ್ಕೆಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>