ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಮುಂದಾದ ಸಾಮಾಜಿಕ ಕಾರ್ಯಕರ್ತೆರೆಹನಾ ಫಾತೀಮಾ ಅವರ ಎರ್ನಾಕುಲಮ್ನ ಪಣಮ್ಪಿಲ್ಲಿಯಲ್ಲಿರುವ ಮನೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಮನೆಯ ಸಾಮಾಗ್ರಿಗಳನ್ನು ಧ್ವಂಸ ಮಾಡಿದ್ದಾರೆ.
ಈ ಬಗ್ಗೆ ಫಾತೀಮಾ ಅವರ ಪತಿ ಮನೋಜ್ ಶ್ರೀಧರ್ ಟ್ವಿಟ್ ಮಾಡಿದ್ದಾರೆ.
Kerala: The house of woman activist Rehana Fatima in Kochi was vandalised by unidentified miscreants earlier today. She had gone up to the #SabarimalaTemple this morning under police protection & returned midway after a meeting with Kerala IG. pic.twitter.com/OYvCG2mvmb
ಫಾತೀಮಾ ಅವರು ಟೆಲಿಕಾಂ ಉದ್ಯೋಗಿ. ಹಾಗಾಗಿ ಬಿಎಸ್ಎನ್ಎಲ್ ಕ್ವಾಟ್ರಸ್ನಲ್ಲಿ ವಾಸವಿದ್ದರು.
ಸುಮಾರು ಬೆಳಿಗ್ಗೆ 8 ಗಂಟೆಗೆ ಮನೆಯ ಒಳಗೆ ನುಗ್ಗಿದ ಇಬ್ಬರು ಕಿಡಿಗೇಡಿಗಳು ಮನೆಯ ಸಾಮಾಗ್ರಿಗಳನ್ನು ನಾಶಗೊಳಿಸಿದ್ದಾರೆ. ಇವರಿಬ್ಬರೂ ಹೆಲ್ಮೆಟ್ ಧರಿಸಿದ್ದರು ಎಂದು ತಿಳಿದು ಬಂದಿದೆ. ಈಗಾಗಲೇ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಫಾತೀಮಾ ಮನೆಯ ಬಳಿ ಪ್ರತಿಭಟನೆ ಕೈಗೊಳ್ಳಲು ಆಗಮಿಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ತಡೆಹಿಡಿಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.