ಹೆಚ್ಚಿನ ದೂರುಗಳ ಬಗ್ಗೆ ಆಯೋಗವು ಅತಾರ್ಕಿಕವಾದ ಆದೇಶಗಳನ್ನು ನೀಡಿದೆ. ಆಯೋಗದ ಆದೇಶದ ಬಗ್ಗೆ ಒಬ್ಬ ಆಯುಕ್ತರು ಭಿನ್ನಮತ ಹೊಂದಿದ್ದರು. ಆಯೋಗವು ಆರೇಳು ಆದೇಶಗಳನ್ನು ನೀಡಿದೆ. ಆದರೆ ಯಾವ ಆದೇಶದಲ್ಲಿಯೂ ಕಾರಣಗಳನ್ನು ಉಲ್ಲೇಖಿಸಿಲ್ಲ. ಹೆಚ್ಚಿನ ಆದೇಶಗಳ ಬಗ್ಗೆ ಭಿನ್ನಮತವೂ ಇತ್ತು. ಬೇರೆ ರಾಜಕೀಯ ಪಕ್ಷಗಳ ಮುಖಂಡರ ವಿರುದ್ಧದ ಇಂತಹುದೇ ದೂರುಗಳ ವಿಚಾರದಲ್ಲಿ ಆಯೋಗವು ಕ್ರಮ ಕೈಗೊಂಡಿದೆ ಎಂದುಸಿಂಘ್ವಿ ಅವರು ವಾದಿಸಿದರು.