<p><strong>ನವದೆಹಲಿ:</strong> ವಿದೇಶಾಂಗ ಸಚಿವಜೈಶಂಕರ್ಎಲ್ಲರಿಗೂ ಸ್ವಾಗತ ಅನ್ನುವ ಒಂದಾದರೂ ದೇಶವನ್ನು ತೋರಿಸಿ ಎಂದು ಹೇಳುವ ಮೂಲಕ ಸಿಎಎ ವಿರೋಧಿಸುವವರಿಗೆ ಟಾಂಗ್ ಕೊಟ್ಟಿದ್ದಾರೆ.</p>.<p>ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಮಾನವ ಹಕ್ಕುಗಳ ಆಯೋಗದ ನಿರ್ದೇಶಕರು ಮಾಡಿರುವ ಆರೋಪವನ್ನು ಟೀಕಿಸಿದ ಜೈಶಂಕರ್ಈ ಹಿಂದೆ ವಿಶ್ವವಿಸಂಸ್ಥೆ ನಿಯೋಗಕಾಶ್ಮೀರಕ್ಕೆ ಭೇಟಿಮಾಡಿದ್ದ ವರದಿಯ ದಾಖಲೆಗಳನ್ನು ನೋಡುವಂತೆ ಹೇಳಿದ್ದಾರೆ.</p>.<p>ಎಕನಾಮಿಕ್ಸ್ ಟೈಮ್ಸ್ ಗ್ಲೋಬಲ್ ಬ್ಯುಸಿನೇಸ್ ಕಾರ್ಯಕ್ರಮದಲ್ಲಿ ಮಾಧ್ಯಮದವರು ಕೇಳಿದ ಸಿಎಎ ಪ್ರಶ್ನೆಗೆ ’ಈ ಕಾಯ್ದೆ ಮೂಲಕ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದೇವೆ, ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಬೇಕು. ಈ ಮೂಲಕ ನಾವು ಯಾವುದೇ ದೊಡ್ಡ ಸಮಸ್ಯೆಯನ್ನು ಸೃಷ್ಟಿಸುತ್ತಿಲ್ಲ‘ ಎಂದುಜೈಶಂಕರ್ ಸ್ಪಷ್ಟಪಡಿಸಿದರು.</p>.<p>ಪ್ರಪಂಚದಲ್ಲಿರುವ ಎಲ್ಲರಿಗೂ ಸ್ವಾಗತ ಎಂದು ಹೇಳುವ ಒಂದು ದೇಶವನ್ನು ನನಗೆ ತೋರಿಸಿ ಎಂದರು.ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಿಂದ (ಆರ್ಸಿಇಪಿ) ಹೊರ ಹೋಗುವುದು ವ್ಯವಹಾರಿಕ ದೃಷ್ಟಿಯಿಂದ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು</p>.<p>ಮಾನವ ಹಕ್ಕುಗಳ ನಿರ್ದೇಶಕರು ಈ ಹಿಂದೆಯೂ ತಪ್ಪು ಹೇಳಿದ್ದರು ಅವರು ದಾಖಲೆಗಳನ್ನು ಒಮ್ಮೆ ನೋಡಲಿ ಎಂದು ಜೈಶಂಕರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವಿದೇಶಾಂಗ ಸಚಿವಜೈಶಂಕರ್ಎಲ್ಲರಿಗೂ ಸ್ವಾಗತ ಅನ್ನುವ ಒಂದಾದರೂ ದೇಶವನ್ನು ತೋರಿಸಿ ಎಂದು ಹೇಳುವ ಮೂಲಕ ಸಿಎಎ ವಿರೋಧಿಸುವವರಿಗೆ ಟಾಂಗ್ ಕೊಟ್ಟಿದ್ದಾರೆ.</p>.<p>ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಮಾನವ ಹಕ್ಕುಗಳ ಆಯೋಗದ ನಿರ್ದೇಶಕರು ಮಾಡಿರುವ ಆರೋಪವನ್ನು ಟೀಕಿಸಿದ ಜೈಶಂಕರ್ಈ ಹಿಂದೆ ವಿಶ್ವವಿಸಂಸ್ಥೆ ನಿಯೋಗಕಾಶ್ಮೀರಕ್ಕೆ ಭೇಟಿಮಾಡಿದ್ದ ವರದಿಯ ದಾಖಲೆಗಳನ್ನು ನೋಡುವಂತೆ ಹೇಳಿದ್ದಾರೆ.</p>.<p>ಎಕನಾಮಿಕ್ಸ್ ಟೈಮ್ಸ್ ಗ್ಲೋಬಲ್ ಬ್ಯುಸಿನೇಸ್ ಕಾರ್ಯಕ್ರಮದಲ್ಲಿ ಮಾಧ್ಯಮದವರು ಕೇಳಿದ ಸಿಎಎ ಪ್ರಶ್ನೆಗೆ ’ಈ ಕಾಯ್ದೆ ಮೂಲಕ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದೇವೆ, ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಬೇಕು. ಈ ಮೂಲಕ ನಾವು ಯಾವುದೇ ದೊಡ್ಡ ಸಮಸ್ಯೆಯನ್ನು ಸೃಷ್ಟಿಸುತ್ತಿಲ್ಲ‘ ಎಂದುಜೈಶಂಕರ್ ಸ್ಪಷ್ಟಪಡಿಸಿದರು.</p>.<p>ಪ್ರಪಂಚದಲ್ಲಿರುವ ಎಲ್ಲರಿಗೂ ಸ್ವಾಗತ ಎಂದು ಹೇಳುವ ಒಂದು ದೇಶವನ್ನು ನನಗೆ ತೋರಿಸಿ ಎಂದರು.ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಿಂದ (ಆರ್ಸಿಇಪಿ) ಹೊರ ಹೋಗುವುದು ವ್ಯವಹಾರಿಕ ದೃಷ್ಟಿಯಿಂದ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು</p>.<p>ಮಾನವ ಹಕ್ಕುಗಳ ನಿರ್ದೇಶಕರು ಈ ಹಿಂದೆಯೂ ತಪ್ಪು ಹೇಳಿದ್ದರು ಅವರು ದಾಖಲೆಗಳನ್ನು ಒಮ್ಮೆ ನೋಡಲಿ ಎಂದು ಜೈಶಂಕರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>