ಕಾರಾಗೃಹ ಕಾಯ್ದೆ ಪ್ರಕಾರ ಪ್ರತಿಯೊಂದು ಕಾರಾಗೃಹಕ್ಕೂ ಡಿವೈಎಸ್ಪಿ ಮಟ್ಟದ ಒಬ್ಬೊಬ್ಬ ಕಾನೂನು ಅಧಿಕಾರಿಯನ್ನು ನೇಮಕ ಮಾಡಬೇಕು. ದೆಹಲಿಯ ತಿಹಾರ್ ಕಾರಾಗೃಹದ 9, ಮಂಡೋಲಿ ಪ್ರದೇಶದಲ್ಲಿರುವ ಒಂದು, ರೋಹಿಣಿ ಪ್ರದೇಶದ ಒಂದು ಸೇರಿದಂತೆ ಒಟ್ಟು 16 ಕಾರಾಗೃಹಗಳಿಗೂ ಒಬ್ಬನೇ ಕಾನೂನು ಅಧಿಕಾರಿ ಎಲ್ಲಾ ಪ್ರಕರಣಗಳನ್ನೂ ನಿಭಾಯಿಸುತ್ತಿದ್ದಾರೆ. ಈ ಸಂಬಂಧ ಹೈಕೋರ್ಟ್ ಆದೇಶ ನೀಡಿದರೂ ಈ ಪ್ರಕ್ರಿಯೆ ನಡೆದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.