<p><strong>ನವದೆಹಲಿ: </strong>ಒಂದು ಕಾಲದ ಆಪ್ತದಿನೇಶ್ ಪ್ರತಾಪ್ ಸಿಂಗ್ ಅವರುಕಾಂಗ್ರೆಸ್ ನಾಯಕಿಸೋನಿಯಾ ಗಾಂಧಿ ಅವರ ವಿರುದ್ಧ ರಾಯ್ಬರೇಲಿಯಲ್ಲಿ ಹಣಾಹಣಿ ನಡೆಸಲಿದ್ದಾರೆ. ದಿನೇಶ್ ಪ್ರತಾಪ್ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ.</p>.<p>ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ದಿನೇಶ್, ಕಳೆದ ವರ್ಷ ಬಿಜೆಪಿ ಸೇರಿದ್ದರು. ಇತ್ತೀಚೆಗೆ ರಾಯ್ಬರೇಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಸಾರ್ವಜನಿಕ ರ್ಯಾಲಿಯನ್ನು ದಿನೇಶ್ ಸಂಘಟಿಸಿದ್ದರು.</p>.<p>ರಾಜಕೀಯ ಹಿನ್ನೆಲೆಯ ದಿನೇಶ್ ಪ್ರತಾಪ್ ಅವರ ಕುಟುಂಬದವರು ಮೊದಲಿನಿಂದಲೂ ಕಾಂಗ್ರೆಸ್ ನಿಷ್ಠರು. ಪ್ರತಾಪ್ ಅವರ ಸಹೋದರ ರಾಕೇಶ್ ಪ್ರತಾಪ್ ಸಿಂಗ್ ಅವರು ಹರ್ಚಾಂದ್ಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು. ಇವರೂ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳಿವೆ. ಆದರೆ ಅದಿನ್ನೂ ಖಚಿತಗೊಂಡಿಲ್ಲ.</p>.<p>ಕಾಂಗ್ರೆಸ್ನ ಭದ್ರಕೋಟೆಯಾಗಿರುವ ರಾಯ್ಬರೇಲಿಯಲ್ಲಿ ಸೋನಿಯಾ ಅವರು 2004ರಿಂದ ಸತತವಾಗಿ ಆಯ್ಕೆಯಾಗುತ್ತಿದ್ದಾರೆ. 2014ರಲ್ಲಿ ಪರಾಭವಗೊಂಡಿದ್ದ ಅಜಯ್ ಅಗರ್ವಾಲ್ ಅವರು ಈ ಬಾರಿಯೂ ಟಿಕೆಟ್ ಕೇಳಿದ್ದರು. ಒಂದು ವೇಳೆ ಟಿಕೆಟ್ ನೀಡದಿದ್ದಲ್ಲಿ ತಮ್ಮ ಸಮುದಾಯದ ಜನರು (ಬನಿಯಾ) ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಎಚ್ಚರಿಸಿದ್ದರು. ಅಜಯ್ ಬೆದರಿಕೆಯನ್ನು ನಿರ್ಲಕ್ಷಿಸಿದ್ದ ಬಿಜೆಪಿ, ಪ್ರಬಲ ಸ್ಥಳೀಯ ಅಭ್ಯರ್ಥಿಯ ಹುಡುಕಾಟದಲ್ಲಿತ್ತು.</p>.<p>ಸಮಾಜವಾದಿ ಪಕ್ಷದ ನಾಯಕರಾದ ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್ ಅವರ ಎದುರಾಳಿಗಳನ್ನೂ ಬಿಜೆಪಿ ಪ್ರಕಟಿಸಿದೆ.</p>.<p>ಖ್ಯಾತ ಭೋಜ್ಪುರಿ ನಟ–ಗಾಯಕ ದಿನೇಶ್ ಲಾಲ್ ಯಾದವ್ ಅವರನ್ನು ಆಜಂಗಡದಲ್ಲಿ ಅಖಿಲೇಶ್ ವಿರುದ್ಧ ಕಣಕ್ಕಿಳಿಸಿದೆ. ಮುಲಾಯಂ ಅವರು ಸ್ಪರ್ಧಿಸಿರುವ ಮೈನ್ಪುರಿ ಕ್ಷೇತ್ರದಲ್ಲಿ ಪ್ರೇಮ್ ಸಿಂಗ್ ಶಕ್ಯ ಅವರನ್ನು ಬಿಜೆಪಿ ಹೆಸರಿಸಿದೆ.</p>.<p><strong>ಸೇನಾ ಆಕ್ಷೇಪ: ಕಿರೀಟ್ಗೆ ಬಿಜೆಪಿ ಕೊಕ್</strong></p>.<p>ಮಿತ್ರಪಕ್ಷ ಶಿವಸೇನಾದ ವಿಶ್ವಾಸ ಉಳಿಸಿಕೊಳ್ಳುವ ಸಲುವಾಗಿ ಮುಂಬೈನಲ್ಲಿ ತನ್ನ ಅಭ್ಯರ್ಥಿಯನ್ನು ಬಿಜೆಪಿ ಬದಲಿಸಿದೆ.ಶಿವಸೇನಾ ಆಕ್ಷೇಪದ ಕಾರಣ ಮುಂಬೈ ಈಶಾನ್ಯ ಕ್ಷೇತ್ರದ ಹಾಲಿ ಸಂಸದಕಿರೀಟ್ ಸೋಮಯ್ಯ ಅವರನ್ನು ಕೈಬಿಟ್ಟಿದೆ. ಈ ಕ್ಷೇತ್ರಕ್ಕೆ ಮನೋಜ್ ಕೋಟಕ್ ಅವರನ್ನು ಆಯ್ಕೆ ಮಾಡಿದೆ. ಆರ್ಥಿಕ ವಿಚಾರಗಳ ಕುರಿತು ಮಾತನಾಡಬಲ್ಲ ಬಿಜೆಪಿಯ ಪ್ರಮುಖ ಮುಖಂಡ ಎನಿಸಿರುವ ಸೋಮಯ್ಯ ಅವರು ಶಿವಸೇನಾದ ಟೀಕಾಕಾರರೂ ಆಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಒಂದು ಕಾಲದ ಆಪ್ತದಿನೇಶ್ ಪ್ರತಾಪ್ ಸಿಂಗ್ ಅವರುಕಾಂಗ್ರೆಸ್ ನಾಯಕಿಸೋನಿಯಾ ಗಾಂಧಿ ಅವರ ವಿರುದ್ಧ ರಾಯ್ಬರೇಲಿಯಲ್ಲಿ ಹಣಾಹಣಿ ನಡೆಸಲಿದ್ದಾರೆ. ದಿನೇಶ್ ಪ್ರತಾಪ್ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ.</p>.<p>ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ದಿನೇಶ್, ಕಳೆದ ವರ್ಷ ಬಿಜೆಪಿ ಸೇರಿದ್ದರು. ಇತ್ತೀಚೆಗೆ ರಾಯ್ಬರೇಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಸಾರ್ವಜನಿಕ ರ್ಯಾಲಿಯನ್ನು ದಿನೇಶ್ ಸಂಘಟಿಸಿದ್ದರು.</p>.<p>ರಾಜಕೀಯ ಹಿನ್ನೆಲೆಯ ದಿನೇಶ್ ಪ್ರತಾಪ್ ಅವರ ಕುಟುಂಬದವರು ಮೊದಲಿನಿಂದಲೂ ಕಾಂಗ್ರೆಸ್ ನಿಷ್ಠರು. ಪ್ರತಾಪ್ ಅವರ ಸಹೋದರ ರಾಕೇಶ್ ಪ್ರತಾಪ್ ಸಿಂಗ್ ಅವರು ಹರ್ಚಾಂದ್ಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು. ಇವರೂ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳಿವೆ. ಆದರೆ ಅದಿನ್ನೂ ಖಚಿತಗೊಂಡಿಲ್ಲ.</p>.<p>ಕಾಂಗ್ರೆಸ್ನ ಭದ್ರಕೋಟೆಯಾಗಿರುವ ರಾಯ್ಬರೇಲಿಯಲ್ಲಿ ಸೋನಿಯಾ ಅವರು 2004ರಿಂದ ಸತತವಾಗಿ ಆಯ್ಕೆಯಾಗುತ್ತಿದ್ದಾರೆ. 2014ರಲ್ಲಿ ಪರಾಭವಗೊಂಡಿದ್ದ ಅಜಯ್ ಅಗರ್ವಾಲ್ ಅವರು ಈ ಬಾರಿಯೂ ಟಿಕೆಟ್ ಕೇಳಿದ್ದರು. ಒಂದು ವೇಳೆ ಟಿಕೆಟ್ ನೀಡದಿದ್ದಲ್ಲಿ ತಮ್ಮ ಸಮುದಾಯದ ಜನರು (ಬನಿಯಾ) ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಎಚ್ಚರಿಸಿದ್ದರು. ಅಜಯ್ ಬೆದರಿಕೆಯನ್ನು ನಿರ್ಲಕ್ಷಿಸಿದ್ದ ಬಿಜೆಪಿ, ಪ್ರಬಲ ಸ್ಥಳೀಯ ಅಭ್ಯರ್ಥಿಯ ಹುಡುಕಾಟದಲ್ಲಿತ್ತು.</p>.<p>ಸಮಾಜವಾದಿ ಪಕ್ಷದ ನಾಯಕರಾದ ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್ ಅವರ ಎದುರಾಳಿಗಳನ್ನೂ ಬಿಜೆಪಿ ಪ್ರಕಟಿಸಿದೆ.</p>.<p>ಖ್ಯಾತ ಭೋಜ್ಪುರಿ ನಟ–ಗಾಯಕ ದಿನೇಶ್ ಲಾಲ್ ಯಾದವ್ ಅವರನ್ನು ಆಜಂಗಡದಲ್ಲಿ ಅಖಿಲೇಶ್ ವಿರುದ್ಧ ಕಣಕ್ಕಿಳಿಸಿದೆ. ಮುಲಾಯಂ ಅವರು ಸ್ಪರ್ಧಿಸಿರುವ ಮೈನ್ಪುರಿ ಕ್ಷೇತ್ರದಲ್ಲಿ ಪ್ರೇಮ್ ಸಿಂಗ್ ಶಕ್ಯ ಅವರನ್ನು ಬಿಜೆಪಿ ಹೆಸರಿಸಿದೆ.</p>.<p><strong>ಸೇನಾ ಆಕ್ಷೇಪ: ಕಿರೀಟ್ಗೆ ಬಿಜೆಪಿ ಕೊಕ್</strong></p>.<p>ಮಿತ್ರಪಕ್ಷ ಶಿವಸೇನಾದ ವಿಶ್ವಾಸ ಉಳಿಸಿಕೊಳ್ಳುವ ಸಲುವಾಗಿ ಮುಂಬೈನಲ್ಲಿ ತನ್ನ ಅಭ್ಯರ್ಥಿಯನ್ನು ಬಿಜೆಪಿ ಬದಲಿಸಿದೆ.ಶಿವಸೇನಾ ಆಕ್ಷೇಪದ ಕಾರಣ ಮುಂಬೈ ಈಶಾನ್ಯ ಕ್ಷೇತ್ರದ ಹಾಲಿ ಸಂಸದಕಿರೀಟ್ ಸೋಮಯ್ಯ ಅವರನ್ನು ಕೈಬಿಟ್ಟಿದೆ. ಈ ಕ್ಷೇತ್ರಕ್ಕೆ ಮನೋಜ್ ಕೋಟಕ್ ಅವರನ್ನು ಆಯ್ಕೆ ಮಾಡಿದೆ. ಆರ್ಥಿಕ ವಿಚಾರಗಳ ಕುರಿತು ಮಾತನಾಡಬಲ್ಲ ಬಿಜೆಪಿಯ ಪ್ರಮುಖ ಮುಖಂಡ ಎನಿಸಿರುವ ಸೋಮಯ್ಯ ಅವರು ಶಿವಸೇನಾದ ಟೀಕಾಕಾರರೂ ಆಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>