ಗಡಿ ಗಸ್ತು ಸಂದರ್ಭದಲ್ಲಿ ಸೇನಾ ಪೊಲೀಸರು ರಾಜು ಅವರನ್ನು ಬಂಧಿಸಿ ದ್ದಾರೆ. ಅವರು ದಾರಿ ತಪ್ಪಿ ಪಾಕಿಸ್ತಾನದೊಳಗೆ ಪ್ರವೇಶಿಸಿದ್ದಾರೆಯೇ ಅಥವಾ ಗೂಢಚಾರಿಕೆ ಉದ್ದೇಶಕ್ಕೆ ಬಂದಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ದೇರಾ ಘಾಜಿ ಖಾನ್ ಜಿಲ್ಲೆಯಲ್ಲಿ ಸೂಕ್ಷ್ಮವಾದ ಹಲವು ಸಂಸ್ಥೆ ಗಳಿವೆ. ಹಾಗಾಗಿ, ಈ ಜಿಲ್ಲೆಗೆ ವಿದೇಶಿಯರ ಪ್ರವೇಶಕ್ಕೆ ಸರ್ಕಾರವು ನಿಷೇಧ ಹೇರಿದೆ. ಆದುದರಿಂದ, ಭಾರತೀಯ ವ್ಯಕ್ತಿ ಇಲ್ಲಿಗೆ ಬಂದಿರುವುದು ಯಾಕೆಂಬುದು ತನಿಖೆ ಬಳಿಕವೇ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.