ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕು ಎಂಬ ನಿಲುವು ಪ್ರತಿಪಾದಿಸಿದ ಏಕೈಕ ಸದಸ್ಯ ಅಬ್ದುಲ್ ರಜಾಕ್ ಸಭೆಯಿಂದ ಅರ್ಧದಲ್ಲಿಯೇ ಹೊರನಡೆದರು. ಮೇಲ್ಮನವಿ ಹಾಗೂ ಜಮೀನು ಸ್ವೀಕಾರಕ್ಕೆ ಸಂಬಂಧಪಟ್ಟಂತೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಮೂಲಗಳು ತಿಳಿಸಿವೆ.ಮಂಡಳಿ ಮುಖ್ಯಸ್ಥರ ಮಾತುಗಳಿಗೆ ಎಲ್ಲ ಸದಸ್ಯರೂ ತಲೆಯಾಡಿಸುತ್ತಾರೆ ಎಂದು ಅವರು ಆರೋಪಿಸಿದ್ದಾರೆ.