‘ದೇವಾಲಯದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಈ ವೇಳೆ ಮಳೆ ಸುರಿದಿದೆ. ಮಳೆಯಿಂದ ರಕ್ಷಣೆ ಪಡೆಯಲು ಜನರು ಬಿದಿರಿನಿಂದ ನಿರ್ಮಿಸಿದ ಮಳಿಗೆಗಳಿಗೆ ನುಗ್ಗಿದ್ದಾರೆ. ಆಗ ಮಳಿಗೆ ಕುಸಿದಿದೆ. ಪರಿಣಾಮ ನೂಕುನುಗ್ಗಲು ಆರಂಭವಾಗಿ ಕಾಲ್ತುಳಿತ ಸಂಭವಿಸಿದೆ‘ ಎಂದು ಗಾಯಾಳುಗಳನ್ನು ಭೇಟಿಯಾದ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.