ಪತ್ರಿಕೆ ಓದುವಾಗ, ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಮಾಡುವಾಗಲೂ ಟೋಪಿ ಶ್ರೀಗಳ ಮುಡಿಯಲ್ಲಿ ಇರುತ್ತಿತ್ತು. ಹೀಗೆ, ಬದುಕಿನುದ್ದಕ್ಕೂ ಶ್ರೀಗಳ ಒಡನಾಡಿಯಾಗಿದ್ದ ಕೇಸರಿ ಟೋಪಿ ಒಂಟಿಯಾಗಿದೆ. ಗಾಳಿಯಿಂದ ರಕ್ಷಣೆ ಪಡೆಯಲು ಸದಾ ಹೆಣಗಾಡುತ್ತಿದ್ದ ಶ್ರೀಗಳು ಕೊನೆಗೂ ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆ ಸೇರಿದರು. ಮತ್ತೆ ಮರಳಿ ಬರಲೇ ಇಲ್ಲ.