<p><strong>ನವದೆಹಲಿ:</strong> ‘ಪ್ರಧಾನಿ ಮೋದಿ ಅವರನ್ನು ‘ಪ್ರಧಾನ ವಿಭಜಕ’ ಎಂದು ಬಣ್ಣಿಸಿ ಟೈಮ್ ಪತ್ರಿಕೆಗೆ ಲೇಖನ ಬರೆದಿರುವುದರ ಹಿಂದೆ ಮೋದಿಯ ವರ್ಚಸ್ಸಿಗೆ ಧಕ್ಕೆ ಉಂಟುಮಾಡುವ ಉದ್ದೇಶವಿದ್ದು, ಪಾಕಿಸ್ತಾನದ ಕಾರ್ಯಸೂಚಿಗೆ ಆ ಲೇಖನದ ಮೂಲಕ ಶಕ್ತಿ ತುಂಬಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.</p>.<p>‘ಆ ಲೇಖನವನ್ನು ಬರೆದವರು ಪಾಕಿಸ್ತಾನದವರು. ಅಂಥವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ.</p>.<p><a href="https://www.prajavani.net/stories/national/modi-divider-chief-635647.html" target="_blank"><span style="color:#000000;"><strong>ಇದನ್ನೂ ಓದಿ:</strong></span> ‘ಮೋದಿ, ಭಾರತದ ಪ್ರಧಾನ ವಿಭಜಕ’ </a></p>.<p>‘2014ರಲ್ಲಿ ಅನೇಕ ವಿದೇಶಿ ಪತ್ರಿಕೆಗಳು ಮೋದಿಯನ್ನು ‘ಒಗ್ಗೂಡಿಸುವ ವ್ಯಕ್ತಿ’ ಎಂದು ಬಣ್ಣಿಸಿ ಲೆಖನಗಳನ್ನು ಪ್ರಕಟಿಸಿದ್ದವು. ಅಂಥ ಲೇಖನಗಳಲ್ಲಿ ‘ಮೋದಿ ಅವರ ಅಭಿವೃದ್ಧಿ ಯೋಜನೆಗಳಿಂದಾಗಿ ಭಾರತವು ಹೊಸ ದಿಕ್ಕಿನಲ್ಲಿ ಸಾಗಲಿದೆ’ ಎಂದು ಶ್ಲಾಘಿಸಲಾಗಿತ್ತು’ ಎಂದು ಸಂಬಿತ್ ನುಡಿದರು.</p>.<p>ಕಾಂಗ್ರೆಸ್ ಮುಖಂಡ ನವಜೋತ್ಸಿಂಗ್ ಸಿಧು ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿದ ಸಂಬಿತ್, ‘ಸಿಧು ಅವರು ಸ್ಯಾಮ್ ಪಿತ್ರೋಡಾ ಅವರು 1984ರ ಸಿಖ್ ದಂಗೆಗಳ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ಮೌನವಹಿಸಿರುವುದೇಕೆ’ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಪ್ರಧಾನಿ ಮೋದಿ ಅವರನ್ನು ‘ಪ್ರಧಾನ ವಿಭಜಕ’ ಎಂದು ಬಣ್ಣಿಸಿ ಟೈಮ್ ಪತ್ರಿಕೆಗೆ ಲೇಖನ ಬರೆದಿರುವುದರ ಹಿಂದೆ ಮೋದಿಯ ವರ್ಚಸ್ಸಿಗೆ ಧಕ್ಕೆ ಉಂಟುಮಾಡುವ ಉದ್ದೇಶವಿದ್ದು, ಪಾಕಿಸ್ತಾನದ ಕಾರ್ಯಸೂಚಿಗೆ ಆ ಲೇಖನದ ಮೂಲಕ ಶಕ್ತಿ ತುಂಬಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.</p>.<p>‘ಆ ಲೇಖನವನ್ನು ಬರೆದವರು ಪಾಕಿಸ್ತಾನದವರು. ಅಂಥವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ.</p>.<p><a href="https://www.prajavani.net/stories/national/modi-divider-chief-635647.html" target="_blank"><span style="color:#000000;"><strong>ಇದನ್ನೂ ಓದಿ:</strong></span> ‘ಮೋದಿ, ಭಾರತದ ಪ್ರಧಾನ ವಿಭಜಕ’ </a></p>.<p>‘2014ರಲ್ಲಿ ಅನೇಕ ವಿದೇಶಿ ಪತ್ರಿಕೆಗಳು ಮೋದಿಯನ್ನು ‘ಒಗ್ಗೂಡಿಸುವ ವ್ಯಕ್ತಿ’ ಎಂದು ಬಣ್ಣಿಸಿ ಲೆಖನಗಳನ್ನು ಪ್ರಕಟಿಸಿದ್ದವು. ಅಂಥ ಲೇಖನಗಳಲ್ಲಿ ‘ಮೋದಿ ಅವರ ಅಭಿವೃದ್ಧಿ ಯೋಜನೆಗಳಿಂದಾಗಿ ಭಾರತವು ಹೊಸ ದಿಕ್ಕಿನಲ್ಲಿ ಸಾಗಲಿದೆ’ ಎಂದು ಶ್ಲಾಘಿಸಲಾಗಿತ್ತು’ ಎಂದು ಸಂಬಿತ್ ನುಡಿದರು.</p>.<p>ಕಾಂಗ್ರೆಸ್ ಮುಖಂಡ ನವಜೋತ್ಸಿಂಗ್ ಸಿಧು ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿದ ಸಂಬಿತ್, ‘ಸಿಧು ಅವರು ಸ್ಯಾಮ್ ಪಿತ್ರೋಡಾ ಅವರು 1984ರ ಸಿಖ್ ದಂಗೆಗಳ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ಮೌನವಹಿಸಿರುವುದೇಕೆ’ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>