ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದ ರಾಮಲೀಲಾ ಮೈದಾನದಾದ್ಯಂತ ತ್ರಿವರ್ಣ ಧ್ವಜಹಿಡಿದು ಸಂಭ್ರಮದಿಂದ ಓಡಾಡುತ್ತಿದ್ದ ಇರ್ಷಾನ್ ಖಾನ್ ಎಂಬುವವರು ಮಾಧ್ಯಮಗಳೊಂದಿಗೆ ಮಾತನಾಡಿ, ‘ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕ್ರರ್ತರು ಇಲ್ಲಿ ಆಪ್ನ ಬಾವುಟದ ಬದಲಿಗೆ ದೇಶದ ಬಾವುಟ ಹಿಡಿದಿರುವುದರ ಹಿಂದೆ ಒಂದು ಉದ್ದೇಶವಿದೆ. ಜನ ಈಗ ಕೇಜ್ರಿವಾಲ್ ಅವರು ರಾಷ್ಟ್ರ ರಾಜಕಾರಣದತ್ತ ಹೊರಳಬೇಕು ಎಂದು ಬಯಸಿದ್ದಾರೆ. ರಾಷ್ಟ್ರದತ್ತ ಗಮನಹರಿಸಲು ಕೇಜ್ರಿವಾಲ್ ಅವರಿಗೆ ಇದು ಸೂಕ್ತ ಸಮಯ. ನಕಾರಾತ್ಮಕ ರಾಷ್ಟ್ರವಾದವನ್ನು ಹೋಗಲಾಡಿಸಲು ಇದು ಸರಿಯಾದ ಸಂದರ್ಭವೂ ಹೌದು. ಅಲ್ಲದೆ, ಆಪ್ಗೆ ಇದನ್ನು ಸಾಧಿಸುವ ಶಕ್ತಿಯೂ ಇದೆ’ ಎಂದು ಅವರು ಹೇಳಿದರು.