ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳತನ ಮಾಡಿ ನಂತರ ವಲಸೆ ಕಾರ್ಮಿಕನನ್ನು ಕೊಲೆ ಮಾಡಿದ ಆಟೊ ಚಾಲಕ

Last Updated 14 ಜೂನ್ 2020, 14:20 IST
ಅಕ್ಷರ ಗಾತ್ರ

ಮುಜಾಫ್ಫರ್‌‌ನಗರ: ಉತ್ತರ ಪ್ರದೇಶದ ಮುಜಾಫ್ಫರ್‌‌ನಗರ ಜಿಲ್ಲೆಯ ವಲಸೆ ಕಾರ್ಮಿಕರೊಬ್ಬರನ್ನು ಇರಿದು ಕೊಲೆ ಮಾಡಿ ಅವರ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

‘ಅರ್ಬಾಸ್‌ (22) ಕೊಲೆಯಾದ ಕಾರ್ಮಿಕ. ಈತ ಮತ್ತು ಈತನ ಸ್ನೇಹಿತ ನೌಮನ್‌ ಕೆಲಸಕ್ಕಾಗಿ ಮಧ್ಯ ಪ್ರದೇಶಕ್ಕೆ ಹೋಗಿದ್ದರು. ಲಾಕ್‌ಡೌನ್‌ ಕಾರಣ ಊರಿಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ನಂತರ ಕಾಲ್ನಡಿಗೆಯಲ್ಲೇ ಊರಿಗೆ ಮರಳಲು ನಿರ್ಧರಿಸಿದರು. ಅಂತೆಯೇ ಶುಕ್ರವಾರ ಇಬ್ಬರೂ ಸತನಾಗೆ ರೀವಾ ಜಿಲ್ಲೆಯ ಮೂಲಕ ಹೊರಟಿದ್ದರು’ ಎಂದು ಭಾನುವಾರ ಪೊಲೀಸರು ತಿಳಿಸಿದರು.

‘ಕಾಲ್ನಡಿಗೆಯಿಂದ ಸುಸ್ತಾಗಿದ್ದ ಇಬ್ಬರೂ ಆಟೊದಲ್ಲಿ ಹೊರಡಲು ನಿರ್ಧರಿದರು. ಆಟೊ ಚಾಲಕ ಇಬ್ಬರ ಬಳಿ ಇದ್ದ ವಸ್ತುಗಳನ್ನು ಕಿತ್ತುಕೊಂಡು ಅರ್ಬಾಸ್‌ನನ್ನು ಕೊಲೆ ಮಾಡಿದ. ನೌಮಾನ್‌ ಹೇಗೊ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT