‘ಅರ್ಬಾಸ್ (22) ಕೊಲೆಯಾದ ಕಾರ್ಮಿಕ. ಈತ ಮತ್ತು ಈತನ ಸ್ನೇಹಿತ ನೌಮನ್ ಕೆಲಸಕ್ಕಾಗಿ ಮಧ್ಯ ಪ್ರದೇಶಕ್ಕೆ ಹೋಗಿದ್ದರು. ಲಾಕ್ಡೌನ್ ಕಾರಣ ಊರಿಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ನಂತರ ಕಾಲ್ನಡಿಗೆಯಲ್ಲೇ ಊರಿಗೆ ಮರಳಲು ನಿರ್ಧರಿಸಿದರು. ಅಂತೆಯೇ ಶುಕ್ರವಾರ ಇಬ್ಬರೂ ಸತನಾಗೆ ರೀವಾ ಜಿಲ್ಲೆಯ ಮೂಲಕ ಹೊರಟಿದ್ದರು’ ಎಂದು ಭಾನುವಾರ ಪೊಲೀಸರು ತಿಳಿಸಿದರು.