ಜಮ್ಮು–ಕಾಶ್ಮೀರಕ್ಕೆ ವಿಶೇಷಾ ಧಿಕಾರ ನೀಡಿದ್ದ 370ನೇ ವಿಧಿ ಯನ್ನು ಕೇಂದ್ರ ಆ. 5ರಂದು ರದ್ದು ಮಾಡಿತು. ಅಂದಿನಿಂದಲೇ ಅಬ್ದುಲ್ಲಾ ಅವರನ್ನು ಗೃಹಬಂಧನ ದಲ್ಲಿ ಇರಿಸಲಾಗಿದೆ. ಆ ರಾಜ್ಯದ ಇತರ ರಾಜಕೀಯ ನಾಯಕರಿಗೂ ಮುಕ್ತವಾಗಿ ಓಡಾಡಲು ಅವಕಾಶ ನೀಡಿಲ್ಲ. ‘ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದೊರೈ ಅವರ ಜನ್ಮ ದಿನದ ಅಂಗವಾಗಿ ಸೆ. 15ರಂದು ಆಯೋಜಿಸಿರುವ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾ ನಿಸಿದ್ದೇನೆ. ಆದರೆ, ಆ. 5ರ ನಂತರ ಅವರನ್ನು ಸಂಪರ್ಕಿಸುವ ಪ್ರಯತ್ನಗಳು ಫಲ ನೀಡಿಲ್ಲ’ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.