ರಾಜಸ್ಥಾನದ ಉದಯಪುರದಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ವೇಳೆ ಮೋದಿ ವಿರುದ್ಧ ಹರಿಹಾಯ್ದ ಅವರು, ‘ಹಿಂದುತ್ವದ ಮೂಲತತ್ವವೇನು? ಭಗವದ್ಗೀತೆಯು ಏನು ಹೇಳುತ್ತದೆ? ಜ್ಞಾನವು ಎಲ್ಲರ ಬಳಿಯೂ ಇದೆ, ಎಲ್ಲರ ಸುತ್ತಲೂ ಇದೆ ಎಂದು ಗೀತೆ ಹೇಳುತ್ತದೆ. ಪ್ರತಿಯೊಂದು ಜೀವಿಯೂ ಜ್ಞಾನವನ್ನು ಹೊಂದಿದೆ. ತಾನೊಬ್ಬ ಹಿಂದು ಎಂದು ನಮ್ಮ ಪ್ರಧಾನಿ ಹೇಳಿಕೊಳ್ಳುತ್ತಾರೆ. ಆದರೆ ಹಿಂದು ಧರ್ಮದ ಮೂಲತತ್ವವೇ ಅವರಿಗೆ ಗೊತ್ತಿಲ್ಲ. ಅವರು ಯಾವ ರೀತಿಯ ಹಿಂದು? ಎಂದು ವ್ಯಂಗ್ಯವಾಡಿದ್ದಾರೆ. ಹಿಂದುತ್ವ ಎಂಬುದು ಬಿಜೆಪಿಗೆ ಕೇವಲ ರಾಜಕೀಯ ಅಸ್ತ್ರ ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.