ರಕ್ಷಣಾ ಸಚಿವರನ್ನೂ ತರಾಟೆಗೆ ತೆಗೆದುಕೊಂಡಿರುವ ಅವರು, ‘ಟ್ವಿಟರ್ನಲ್ಲಿ ಚೀನಾ ಹೆಸರನ್ನು ಉಲ್ಲೇಖಿಸದೇ ಭಾರತೀಯ ಸೇನೆಗೆ ಏಕೆ ಅಪಮಾನ ಮಾಡಿದಿರಿ? ಯೋಧರ ಸಾವಿಗೆ ಸಂತಾಪ ಸೂಚಿಸಲು ಎರಡು ದಿನ ತೆಗೆದುಕೊಂಡಿದ್ದು ಏಕೆ? ಅತ್ತ ಯೋಧರು ಹುತಾತ್ಮರಾಗುತ್ತಿರುವಾಗ ನೀವು ಚುನಾವಣಾ ಸಮಾವೇಶಗಳನ್ನು ನಡೆಸುವುದು ಎಷ್ಟು ಸರಿ’ ಎಂದು ರಾಜನಾಥ್ ಸಿಂಗ್ ಅವರನ್ನು ಪ್ರಶ್ನಿಸಿದ್ದಾರೆ.