‘ಹಲವು ವರ್ಷಗಳ ಹಿಂದೆ ನನ್ನ ಪಟ್ಟಣದಲ್ಲಿಯೇ ಪೊಲೀಸ್ ಠಾಣೆಯನ್ನು ನಕ್ಸಲರು ಸ್ಫೋಟಿಸಿದ್ದರು. ಬಡವರ ಸೇವೆ ಹಾಗೂ ಅವರ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂಬ ನನ್ನ ಆಸೆಗೆ ಈ ಘಟನೆಯೇ ಪ್ರೋತ್ಸಾಹ ನೀಡಿತು. ದಾಂತೇವಾಡದಲ್ಲಿ ನಕ್ಸಲ್ ನಿರ್ಮೂಲನೆ ಮಾಡಲು ಶಿಕ್ಷಣದ ಮೂಲಕ ಅಭಿವೃದ್ಧಿ ಮಾಡುವುದು ಅಗತ್ಯವಿದೆ’ ಎಂದು ಹೇಳುವ ಅವರು, ಈ ಬಾರಿ ಸಾರ್ವಜನಿಕ ಆಡಳಿತ ಸೇವೆಗೆ ಅರ್ಹತೆ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.