ಧಾರ್ಮಿಕ ಭಾವನೆಗೆ ಧಕ್ಕೆ ತಾರದಂತೆ ಎಚ್ಚರಿಕೆ
ಜೊಮ್ಯಾಟೊ ಗ್ರಾಹಕನಿಗೆ ಪೊಲೀಸರ ಎಚ್ಚರಿಕೆ

ಜಬಲ್ಪುರ್, ಮಧ್ಯಪ್ರದೇಶ: ಹಿಂದೂ ಅಲ್ಲದ ಡೆಲಿವರಿ ಹುಡುಗನಿಂದ ಆಹಾರ ಪೊಟ್ಟಣ ಪಡೆಯುವುದಿಲ್ಲ ಎನ್ನುವ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಜೊಮ್ಯಾಟೊ ಗ್ರಾಹಕ ಅಮಿತ್ ಶುಕ್ಲಾಗೆ ಧರ್ಮದ ಹೆಸರಿನಲ್ಲಿ ದ್ವೇಷ ಹರಡದಂತೆ ಎಚ್ಚರಿಸಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಈ ಬಗ್ಗೆ ಅಮಿತ್ ಶುಕ್ಲಾನಿಂದ ಪೊಲೀಸರು ಮುಚ್ಚಳಿಕೆ ಪತ್ರವನ್ನೂ ಬರೆಸಿಕೊಂಡಿದ್ದಾರೆ.
ಘಟನೆ ಕುರಿತು ಜೊಮ್ಯಾಟೊ ಡೆಲಿವರಿ ಹುಡುಗ ಫಯಾಜ್, ‘ಮನಸಿಗೆ ನೋವಾಯಿತು. ಆದರೆ, ಏನು ಮಾಡು ವುದು?’ ಎಂದು ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.