ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಸಾಲ ಮನ್ನಾ ಆದೇಶಕ್ಕೆ ಸಹಿ ಹಾಕಿದ್ದಕ್ಕೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ‘ಬಿಜೆಪಿ ಕರ್ನಾಟಕ’, ‘ಆರು ತಿಂಗಳುಗಳು ಕಳೆದರೂ ಕರ್ನಾಟಕದಲ್ಲಿ ಸಾಲ ಮನ್ನಾ ಆಗಿಲ್ಲ. ಅದೇ ರೀತಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದ ರೈತರಿಗೂ ನಿಮ್ಮ ಸುಳ್ಳು ಹೇಳುವ ಕಲೆಗಾರಿಕೆ ಗೊತ್ತಾಗಲಿದೆ.ಟ್ವೀಟ್, ಪತ್ರಿಕಾ ಪ್ರಕಟಣೆಗಳಿಂದ ಸಾಲ ಮನ್ನಾ ಆದಂತಾಗುವುದಿಲ್ಲ. ಸಾಲ ಮನ್ನಾ ಎಂಬುದು ಆಲೂಗಡ್ಡೆಯಿಂದ ಚಿನ್ನ ಪಡೆದಂತಲ್ಲ’ ಎಂದು ಟ್ವೀಟ್ ಮಾಡಿದೆ.