ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸ ಹೋಬಳಿಯ ಹಿರೇಬೈಲು ಬಳಿ ಕಾರೊಂದು ಕಂದಕಕ್ಕೆ ಉರುಳಿ ನಾಲ್ವರು ಮೃತಪಟ್ಟಿದ್ದಾರೆ.
ರಾಜು ರೈ(58), ವಿಶ್ವನಾಥ್(55), ಮಮತಾ(51) ಪುಷ್ಪಾವತಿ (45) ಮೃತಪಟ್ಟವರು. ಗಾಯಗೊಂಡಿದ್ದ ಒಬ್ಬರನ್ನು ಕಳಸದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಹಾಗೂ ಉಪ್ಪಿನಂಗಡಿಯವರು.
ಕಳಸ ಠಾಣೆ ಪೊಲೀಸರುರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.